ಪಾಕ್ನಲ್ಲೊಂದು ವಿನೂತನ ವೈದ್ಯ ಪದ್ಧತಿ!?
ಇಸ್ಲಾಮಾಬಾದ್, ಜ.13: ದಿನಕ್ಕೊಂದು ಸೇಬು ತಿನ್ನಿ ಕಾಯಿಲೆಗಳಿಂದ ದೂರವಿರಿ ಅನ್ನುವುದು ಹಳೇ ಗಾದೆ. ಆದರೆ ನಿಮ್ಮ ರೋಗ ವಾಸಿಯಾಗಲು ಸೇಬೇ ತಿನ್ನಬೇಕಾಗಿಲ್ಲ ಬರೀ ಕುಂಬಳಕಾಯಿಂದ ಎಂತಹ ಕಾಯಿಲೆಯನ್ನಾದರೂ ವಾಸಿ ಮಾಡುತ್ತೇನೆ ಎನ್ನುತ್ತಿದ್ದಾರೆ ಪಾಕಿಸ್ತಾನದ ಧರ್ಮಗುರು.
ಪಾಕಿಸ್ತಾನ್ ಮೂಲದ ಹಾಜೀ ಮಹಮ್ಮದ್ ಖಾನ್(65) ಎಂಬುವವರು ಅಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿ ಕುಂಬಳಕಾಯಿ ವೈದ್ಯರೆಂದೇ ಹೆಸರಾಗಿದ್ದಾರೆ. ಸಕ್ಕರೆ ಕಾಯಿಲೆ, ಕ್ಷಯ, ಕ್ಯಾನ್ಸರ್, ಹೆಪಟೈಟಿಸ್ನಂತಹ ಭಯಾನಕ ಕಾಯಿಲೆಗಳನ್ನೂ ಅವರು ವಾಸಿ ಮಾಡಿ ಪ್ರಪಂಚದ ಗಮನವನ್ನೇ ಸೆಳೆದಿದ್ದಾರೆ. ಇವರ ಬಳಿಗೆ ಚಿಕಿತ್ಸೆಗಾಗಿ ಸೈನ್ಯಾಧಿಕಾರಿಗಳು, ಕೆಲವೊಂದು ಸಂಸ್ಥೆಯ ಉನ್ನತಾಧಿಕಾರಿಗಳು ಸಹಾ ಬರುತ್ತಾರೆ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.
ಖಾನ್ರ ಚಿಕಿತ್ಸೆಯ ರಹಸ್ಯ ಅಡಗಿರುವುದು ಕುಂಬಳಕಾಯಿಯಲ್ಲೇ. ಅವರ ಬಳಿಗೆ ಚಿಕಿತ್ಸೆಗಾಗಿ ಬರುವ ಎಲ್ಲಾರಿಗೂ ಇದರ ಮೂಲಕವೇ ಚಿಕಿತ್ಸೆ ಕೊಟ್ಟು ಗುಣಪಡಿಸುತ್ತಾರೆ. ಮೆದುಳಿನಲ್ಲಿ ರಕ್ತಸ್ರಾವವಾಗಿ ಕೋಮಾ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರು ಇವರ ಚಿಕಿತ್ಸೆಯಿಂದ ಗುಣವಾಗಿರುವುದಾಗಿ ಅಲ್ಲಿನ ಡಾನ್ ಪತ್ರಿಕೆ ವರದಿ ಮಾಡಿದೆ. ಆಧುನಿಕ ವೈದ್ಯಕೀಯಕ್ಕೆ ಸವಾಲಾಗಿರುವ ಕೆಲವೊಂದು ಕಾಯಿಲೆಗಳನ್ನು ಖಾನ್ ತಮ್ಮ ಕುಂಬಳಕಾಯಿ ಚಿಕಿತ್ಸೆ ಮೂಲಕ ಮಾಡುತ್ತಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.
(ಏಜನ್ಸೀಸ್)