ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳ ಅಸ್ವಸ್ಥ
ಬೆಂಗಳೂರು, ಜ.10: ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳರು ಶ್ವಾಸಕೋಸ ತೊಂದರೆಯಿಂದ ತೀವ್ರವಾಗಿ ಬಳಲಿ ಅಸ್ವಸ್ಥಗೊಂಡಿದ್ದಾರೆ. ಈಗ ಅವರು ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಖ್ಯವಾಗಿ ವ್ಯಾಸರಾಯ ಬಲ್ಲಾಳರು ತಮ್ಮ ಸಣ್ಣ ಕತೆ ಹಾಗು ಕಾದಂಬರಿಗಳ ಮೂಲಕ ತಮ್ಮ ಸುತ್ತಲಿನ ವಾಸ್ತವ ಜಗತ್ತಿನ ಚಿತ್ರಣವನ್ನೂ, ಮಾನವ ಆದರ್ಶಗಳನ್ನೂ ಬಿಂಬಿಸಿದ್ದಾರೆ. 1946ರಲ್ಲಿ ಮುಂಬಯಿಗೆ ಬಂದು ತೈಲ ಕಂಪನಿಯೊಂದರಲ್ಲಿ ಉದ್ಯೋಗ ಕೈಗೊಂಡು ಅಲ್ಲೇ ಬಹಳಷ್ಟು ಕಾಲ ನೆಲಸಿದ್ದರು. ಮುಂಬಯಿಯಲ್ಲಿ ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹಳಷ್ಟು ದುಡಿದಿದ್ದಾರೆ. ಮುಂಬೈ ಕನ್ನಡಿಗರ ಬದುಕನ್ನು ಬಹಳ ಚೆನ್ನಾಗಿ ಚಿತ್ರಿಸಿದವರಲ್ಲಿ ಬಲ್ಲಾಳರು ಮೊದಲಿಗರು.
ಇತ್ತೀಚೆಗಿನ ಮೂಡಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿ, ಉಡುಪಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಅವರು ಶ್ರೀಘ್ರ ಚೇತರಿಸಿಕೊಳ್ಳಲಿ ಎಂದು ಸಾಹಿತ್ಯಾಭಿಮಾನಿಗಳು ಹಾರೈಸುತ್ತಿದ್ದಾರೆ.
(ದಟ್ಸ್ಕನ್ನಡ ವಾರ್ತೆ)
Comments
Story first published: Thursday, January 10, 2008, 11:34 [IST]