ರಾಜ್ಯ ಸಂಸದರಿಗೆ ನಾಚಿಕೆಯಾಗ ಬೇಕು!
ಬೆಂಗಳೂರು,
ಜ.6:
ರೈಲ್ವೆ
ಇಲಾಖೆಯಲ್ಲಿ
ಕನ್ನಡಿಗರಿಗೆ
ಆಗುತ್ತಿರುವ
ಅನ್ಯಾಯವನ್ನು
ಖಂಡಿಸಿ,
ಪ್ರತಿಭಟಟಿಸಿದ
ಕರವೇ
ಕಾರ್ಯಕರ್ತರ
ಮೇಲೆ
ಶನಿವಾರ(ಜ.5)
ಪೊಲೀಸರು
ಲಾಠಿ
ಬೀಸಿದ್ದಾರೆ.
ಆದರೆ
ಇದನ್ನು
ಪೊಲೀಸರು
ಒಪ್ಪುತ್ತಿಲ್ಲ.
ಇದೆಲ್ಲವನ್ನೂ
ನೋಡುತ್ತಾ
ರಾಜ್ಯ
ಸಂಸದರು
ಮೌನವಾಗಿ
ಕೂತಿದ್ದಾರೆ.
ಕರವೇ
ಪ್ರತಿಭಟನೆ
ನೋಡಿ
ಅವರಿಗೆ
ನಾಚಿಗೆಯಾಗಿರಬೇಕು.
ಯಶವಂತಪುರ
ರೈಲ್ವೆ
ಪರೀಕ್ಷಾ
ಕೇಂದ್ರದಲ್ಲಿ
ಇಲಾಖೆಯ
4700
ಡಿ
ಗ್ರೂಪ್
ಹುದ್ದೆಗಳಿಗೆ
ದೈಹಿಕ
ಅರ್ಹತಾ
ಪರೀಕ್ಷೆ
ನಡೆಯುತ್ತಿದೆ.
ನ್ಯಾಯವಾಗಿ
ಈ
ಹುದ್ದೆಗಳು
ಸ್ಥಳೀಯರಿಗೆ
ದೊರೆಯಬೇಕು.
ಬಿಹಾರಿ
ಬಾಬುಗಳ
ಮೇಲೆ
ಲಾಲೂ
ಕೃಪಾಕಟಾಕ್ಷ
ಇರುವುದರಿಂದ
ಬಹುಪಾಲು
ಹುದ್ದೆಗಳು
ಅವರಿಗೇ
ಸಿಗುತ್ತವೆ
ಎನ್ನುವುದರಲ್ಲಿ
ಅನುಮಾನವೇ
ಇಲ್ಲ.
ಇದನ್ನೆಲ್ಲಾ
ನೋಡುತ್ತಾ
ಕನ್ನಡಿಗರು
ಬಳೆತೊಟ್ಟು
ಕೂರಬೇಕಾಗಿಲ್ಲ
ಎಂದು
ರೈಲ್ವೆ
ಇಲಾಖೆಗೆ
ಕರವೇ
ಕಾರ್ಯಕರ್ತರು
ತೋರಿಸಿದ್ದಾರೆ.
ಯಶವಂತಪುರ ಪರೀಕ್ಷಾ ಕೇಂದ್ರದಲ್ಲಿ ಗ್ರೂಪ್ ಡಿ ಪರೀಕ್ಷೆಗಾಗಿ ಹಾಜರಾದ ಕನ್ನಡಿಗರ ಸಂಖ್ಯೆ 110, ಬಿಹಾರಿಗಳು 1500. ಅರ್ಹಾತಾ ಪರೀಕ್ಷೆಗೆ ಹಾಜರಾದ ಬಿಹಾರಿಗಳ ಸಂಖ್ಯೆ ನೋಡಿದರೆ ಸಮಸ್ಯೆ ನಿಮಗೇ ಅರ್ಥವಾಗುತ್ತದೆ. ಸಿಂಹಪಾಲು ಹುದ್ದೆಗಳು ಅವರಿಗೇ ಸಿಗುತ್ತವೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಕರ್ನಾಟಕ ರೈಲ್ವೆ ಇಲಾಖೆಯಲ್ಲಿ ಡಿ ಗ್ರೂಪ್ ನೇಮಕಾತಿಯಲ್ಲಿ ಸ್ಥಳೀಯ ಕನ್ನಡಿಗರಿಗೇ ಆದ್ಯತೆ ನೀಡಬೇಕು, ಬಿಹಾರಿಗಳನ್ನು ತಂದು ತುಂಬಬೇಡಿ ಎಂದು ಆಗ್ರಹಿಸಿ ಶನಿವಾರವೂ ಪ್ರತಿಭಟನೆ ಮುಂದುವರಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಸುಮಾರು 130 ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಕೀಲ ಹಾಗೂ ವೇದಿಕೆಯ ಕಾರ್ಯಕರ್ತ ನೇತ್ರಮೂರ್ತಿ ಅವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಹರೀಶ್(25) ಎಂಬ ಕಾರ್ಯಕರ್ತ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿ, ಕನ್ನಡಿಗರಿಗೆ ಇಷ್ಟೊಂದು ಅನ್ಯಾಯವಾಗುತ್ತಿದ್ದರೂ ರಾಜ್ಯದ ಯಾವ ಸಂಸದರೂ ಚಕಾರ ಎತ್ತುತ್ತಿಲ್ಲ. ಪ್ರತಿಭಟನೆಯನ್ನು ಸೊಮವಾರ (ಜ.7) ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಪ್ರತಿಭಟನೆ ಉಗ್ರರೂಪ ತಾಳಬಹುದು ಎಂದು ಎಚ್ಚರಿಸಿದ್ದಾರೆ.
ನಾವು ಪ್ರತಿಭಟಿಸಲು ಮುಂದಾದಾಗ ಪೊಲಿಸರು ಏಕಾಏಕಿ ದಾಳಿ ಮಾಡಿ ಲಾಠಿ ಪ್ರಹಾರ ಮಾಡಿದರು. ಜತೆಗೆ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಉಲ್ಪತ್ ಹುಸೇನ್ ಬಿಹಾರಿಗಳ ಪರ ನಿಂತು ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕರವೇ ಕಾರ್ಯಕರ್ತರು ತಿಳಿಸಿದರು.
ಈ ಬಗ್ಗೆ ಉಪ ಪೊಲೀಸ್ ಆಯುಕ್ತ ಹುಸೇನ್ ವಿವರಣೆ ನೀಡುತ್ತಾ ಹೀಗೆಂದರು, ಬ್ಯಾರಿಕೇಡ್ ಹಾಕಿ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ಆದರೆ ಕಾರ್ಯಕರ್ತರು ಪರೀಕ್ಷಾ ಕೇಂದ್ರಕ್ಕೆ ನುಗ್ಗಲು ಯತ್ನಿಸಿದಾಗ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು. ಅವರ ಮೇಲೆ ಲಾಠಿ ಪ್ರಹಾರ ಮಾಡಿಲ್ಲ ಎಂದು ಹೇಳಿದರು.
(ದಟ್ಸ್ಕನ್ನಡ ವಾರ್ತೆ)