ರಾಜ್ಯದ ತಾಲೂಕು ಮಟ್ಟ್ದಕ್ಕೂ ಹಬ್ಬಿದ ಇ- ಮಾಧ್ಯಮ
ನಾಗಮಂಗಲ, ಡಿ.22: ರಾಜ್ಯದಲ್ಲಿ ಇ -ಮಾಧ್ಯಮ ಜನಪ್ರಿಯವಾಗುತ್ತಿರುವುದಕ್ಕೆ ಸಾಕ್ಷಿಯೆಂಬಂತೆ ನಾಗಮಂಗಲದಲ್ಲಿ ಇ-ಪತ್ರಿಕೆ ಇಂದು ಅನಾವರಣಗೊಳ್ಳುತ್ತಿದೆ.ಮಹಾನಗರಗಳಿಗೆ ಸೀಮಿತವಾಗಿದ್ದ ಇ ಮಾಧ್ಯಮ ಈಗ ತಾಲೂಕು ಮಟ್ಟಕ್ಕೂ ಕಾಲಿಟ್ಟಿದೆ.
ಮಂಡ್ಯ ಜಿಲ್ಲೆಯ ಸಮಗ್ರ ಸುದ್ದಿ ಸಾರವನ್ನು ಜನತೆಗೆ ನೀಡುವ ನಿಟ್ಟಿನಲ್ಲಿ http://www.taluknews.com/ ಎಂಬ ಇ- ಪತ್ರಿಕೆಯನ್ನು ಹೊರತರುತ್ತಿರುವುದಾಗಿ ಪತ್ರಿಕೆಯ ಸಂಪಾದಕ ಕೆ ವೈ ಅಶೋಕ್ ಹೇಳಿದರು. ನಾಗಮಂಗಲದ ಗಾಂಧಿಭವನದ ಆವರಣದಲ್ಲಿ ಶನಿವಾರ(ಡಿ.22) ಸಂಜೆ 5:30 ಗಂಟೆಗೆ ಪತ್ರಿಕಾ ಪ್ರಾರಂಭೋತ್ಸವ ನಡೆಯಲಿದ್ದು, ಇ ಪತ್ರಿಕೆ ಹಾಗೂ ಪಾಕ್ಷಿಕ ಪತ್ರಿಕೆಯನ್ನು ಅನಾವರಣಗೊಳಿಸಲಾಗುತ್ತದೆ.
ಈ ಸಮಾರಂಭದ ಉದ್ಘಾಟನೆಯನ್ನು ಜನಪದ ಸೇವಾ ಟ್ರಸ್ಟ್ , ಮೇಲುಕೋಟೆಯ ಅಧ್ಯಕ್ಷರಾದ ಸುರೇಂದ್ರ ಕೌಲಗಿಯವರು ಮಾಡಲಿದ್ದಾರೆ. ನಾಗಮಂಗಲದ ಮಾಜಿ ಸಚಿವ ಎನ್ .ಚೆಲುವರಾಯಸ್ವಾಮಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ನಾಗಮಂಗಲ ತಾಲೂಕಿನ ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಮಾಹಿತಿಗಳು, ಸುದ್ದಿಗಳು, ಮಂಡ್ಯ ಜಿಲ್ಲೆಯ ತುರ್ತು ಮಾಹಿತಿ, ಚರ್ಚೆ , ವಾರ್ತೆಗಳನ್ನು ಇ ಪತ್ರಿಕೆ ಹೊಂದಿರುತ್ತದೆ. ಪತ್ರಿದಿನ ಬೆಳಗ್ಗೆ 8 ಗಂಟೆಗೆ ಸುದ್ದಿಗಳು ಅಪ್ ಲೋಡ್ ಆಗುತ್ತವೆ. ಫ್ಲಾಶ್ ನೂಸ್ ಇದ್ದರೆ ತಕ್ಷಣವೇ ಕಳಿಸುವ ವ್ಯವಸ್ಥೆ ಕೂಡ ಇದೆ.ಹಲವಾರು ಹೊಸ ಅಂಶಗಳನ್ನು ನಮ್ಮ ಪತ್ರಿಕೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಳವಡಿಸಲಾಗುವುದು ಎಂದು ಸಂಪಾದಕ ಕೆ. ವೈ ಅಶೋಕ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)