ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಮಾಜಿ ಸಚಿವ ಎಂ.ಪಿ.ಪ್ರಕಾಶ್?
ಬೆಂಗಳೂರು. ಡಿ.16 : ಮಾಜಿ ಸಚಿವ ಮತ್ತು ಜೆಡಿಎಸ್ ಗುಂಪಿನ ರೆಬಲ್ ನಾಯಕ ಎಂ.ಪಿ.ಪ್ರಕಾಶ್, ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ನಾಯಕರ ಜೊತೆ ಈ ಬಗೆಗಿನ ಅವರ ಚರ್ಚೆ ಮುಂದುವರೆದಿದೆ.
ಡಿಸೆಂಬರ್ ಅಂತ್ಯದೊಳಗಾಗಿ ತಮ್ಮ ನಿರ್ಧಾರ ಪ್ರಕಟಪಡಿಸುವುದಾಗಿ ಹೇಳಿರುವ ಎಂ.ಪಿ.ಪ್ರಕಾಶ್, ಹೊಸ ಪಕ್ಷ ಕಟ್ಟುವ ಪ್ರಸ್ತಾಪವನ್ನು ತಳ್ಳಿ ಹಾಕಿದ್ದಾರೆ. ಕಾಂಗ್ರೆಸ್ ಬಗ್ಗೆ ಅವರು ಒಲವು ಹೊಂದಿದ್ದು ವೀರಪ್ಪ ಮೊಯ್ಲಿ, ಪೃಥ್ವಿರಾಜ್ ಚೌಹಾಣ್ ಸೇರಿದಂತೆ ವಿವಿಧ ಕಾಂಗ್ರೆಸ್ ನಾಯಕರ ಜೊತೆ ಅವರು ಸಂಪರ್ಕ ಹೊಂದಿದ್ದಾರೆ.
ಎಂ.ಪಿ.ಪ್ರಕಾಶ್ ಅವರಿಗೆ ಸಮಾಜವಾದಿ ಪಕ್ಷ, ಜೆಡಿಯು ಈಗಾಗಲೇ ಆಹ್ವಾನ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, December 16, 2007, 17:04 [IST]