ಸಾಮೂಹಿಕ ಅತ್ಯಾಚಾರ ಪ್ರಕರಣ : ಗೊಂದಲದ ತಿರುವು!
ಬೆಂಗಳೂರು, ಡಿ.16 : ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದಿದ್ದ ದೆಹಲಿ ಮಹಿಳೆ, ತನ್ನ ದೂರು ವಾಪಸ್ ಪಡೆಯಲು ನಿರ್ಧಾರ ಮಾಡಿದ್ದಾರೆ. ಈ ಪರಿಣಾಮ ಪ್ರಕರಣ ಹೊಸ ತಿರುವು ಪಡೆದಿದೆ.
ಟ್ಯಾಕ್ಸಿ ಚಾಲಕ ಮತ್ತು ಆತನ ಮಿತ್ರರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬೆಂಗಳೂರು ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದ 26ವರ್ಷದ ಈ ದೆಹಲಿ ಮಹಿಳೆ, ಶನಿವಾರ ನಗರಕ್ಕೆ ತನ್ನ ವಕೀಲರೊಂದಿಗೆ ಆಗಮಿಸಿ, ದೂರು ವಾಪಸ್ ಪಡೆಯುವ ಇಚ್ಛೆ ವ್ಯಕ್ತಪಡಿಸಿ ಮನವಿ ಪತ್ರವನ್ನು ಪೊಲೀಸರಿಗೆ ನೀಡಿದ್ದಾರೆ.
ಈ ಹಿಂದೆ ದಿಢೀರ್ ನಾಪತ್ತೆಯಾಗಿದ್ದ ಮಹಿಳೆ ಮರಳಿ ಬಂದಿರುವುದು, ದೂರು ವಾಪಸ್ ಪಡೆಯುತ್ತಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಮಹಿಳೆ ದೂರು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಆದರೆ ಈ ಬಗೆಗಿನ ತನಿಖೆ ಮುಂದುವರೆಯಲಿದೆ. ಒಂದು ವೇಳೆ ದೂರಿನಲ್ಲಿ ಸುಳ್ಳಿನಾಂಶ ಇದ್ದರೇ, ದೂರು ನೀಡಿದವರ ವಿರುದ್ಧವೇ ಕ್ರಮಕೈಗೊಳ್ಳುತ್ತೇವೆ ಎಂದು ಎಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಬಿಪಿನ್ ಗೋಪಾಲಕೃಷ್ಣ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
:
ಸಾಮೂಹಿಕ
ಅತ್ಯಾಚಾರಕ್ಕೆ
ಗುರಿಯಾದಳು
ದೆಹಲಿ
ಮಹಿಳೆ