ಪ್ರೊ. ಕೆ.ರಾಮದಾಸ್ ರವರ ಪತ್ನಿ ಲೇಖಕಿ ನಿರ್ಮಲಾ ವಿಧಿವಶ
ಮೈಸೂರು, ನ.25:ವಿಚಾರವಾದಿ, ಸಾಮಾಜಿಕ ಚಿಂತಕ ದಿವಂಗತ ಪ್ರೊ.ಕೆ. ರಾಮದಾಸ್ ರವರ ಪತ್ನಿ ಆರ್. ನಿರ್ಮಲಾ(59)ರವರು ಶನಿವಾರ (ನ.24) ಮಧ್ಯಾಹ್ನ 1:45 ರ ಸುಮಾರಿಗೆ ಮೃತರಾಗಿದ್ದಾರೆ.
ದೀರ್ಘಕಾಲದಿಂದ ಅಸ್ವಸ್ಥರಾಗಿದ್ದ ನಿರ್ಮಲಾರವರು ಪುತ್ರಿ ಸ್ನೇಹಾ ಹಾಗೂ ಅಳಿಯ ಓಂಕಾರರವರನ್ನು ಅಗಲಿದ್ದಾರೆ.
ಕುವೆಂಪುನಗರದ ತಮ್ಮ ಸ್ವಗೃಹದಲ್ಲಿ ನಿಧನರಾದ ನಿರ್ಮಲಾರವರ ಆತ್ಮಕ್ಕೆ ಶಾಂತಿ ಕೋರಲು, ಜ್ಞಾನಪೀಠ ಪುರಸ್ಕೄತ ಡಾ. ಯು .ಆರ್. ಅನಂತಮೂರ್ತಿ, ಬಂಡಾಯ ಸಾಹಿತಿ ದೇವನೂರು ಮಹಾದೇವ,ಕವಿ ತುಕರಾಂ, ರಶೀದ್, ಕಾಳೆ ಗೌಡ ನಾಗವಾರ,ಸಾಹಿತಿ ಎಚ್. ಎಲ್. ಕೇಶವಮೂರ್ತಿ, ಜಿ.ಎಚ್. ನಾಯಕ್, ಪ್ರಭುಶಂಕರ್ ಮುಂತಾದ ಸಾಹಿತ್ಯವಲಯದ ಗಣ್ಯರುಗಳು ಹಾಗೂ ಆತ್ಮೀಯರಾದ ಕೃಪಾಕರ್ , ಸೇನಾನಿ, ರವಿವರ್ಮ ಕುಮಾರ್, ಎಂ. ಮಹದೇವ್ ಅಲ್ಲದೆ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಮನ ಸಲ್ಲಿಸಿದರು. .
ಶಿವಮೊಗ್ಗದ
ಜೋಗದವರಾದ
ನಿರ್ಮಲಾರವರು,
ಪ್ರಾಧ್ಯಾಪಕರಾಗಿ
ಸೇವೆ
ಸಲ್ಲಿಸಿದ್ದರು.
1997
ರಲ್ಲಿ
ಚಲ್
ಮೇರೆ
ಲೂನಾ
ಪ್ರಬಂಧ
ಸಂಗ್ರಹಕ್ಕೆ
ಕರ್ನಾಟಕ
ಸಾಹಿತ್ಯ
ಅಕಾಡೆಮಿ
ಪ್ರಶಸ್ತಿಯನ್ನು
ಗಳಿಸಿದ್ದರು.
ಪಚ್ಚೆ
ಪೈರು
ಮತ್ತು
ಉರಿವ
ಒಲೆವಲೆ
ಮುಂದೆ
ಮುಂತಾದ
ಕವನ
ಸಂಗ್ರಹಗಳನ್ನು
ಬರೆದಿದ್ದರು.
ಮೃತರ
ಅಂತ್ಯಕ್ರಿಯೆಯನ್ನು
ಶನಿವಾರ
ಸಂಜೆ
ಹರಿಶ್ಚಂದ್ರ
ಘಾಟ್
ನಲ್ಲಿ
ನೆರವೇರಿಸಲಾಯಿತು.
.
(ದಟ್ಸ್ ಕನ್ನಡ ವಾರ್ತೆ)