ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಿಗಮಪ:ಈ ಐವರಲ್ಲಿ ಯಾರಾಗಬಹುದು ಗಾನ ಕೋಗಿಲೆ?

By Staff
|
Google Oneindia Kannada News

ಬೆಂಗಳೂರು, ನವೆಂಬರ್ 21 : ಜೀ ಗ್ರೂಪ್‌ನ ಹೆಮ್ಮೆಯ ಕಾರ್ಯಕ್ರಮ ಸರಿಗಮಪ ಸ್ಪರ್ಧೆಯ ಅಂತಿಮ ಸುತ್ತು ನವೆಂಬರ್ 25ರಂದು ರಾತ್ರಿ 9ರಿಂದ ಪ್ರಸಾರವಾಗಲಿದೆ. ಕರ್ನಾಟಕದಾದ್ಯಂತದಿಂದ ಐದು ಗೃಹಿಣಿಯರು ಆಯ್ಕೆಯಾಗಿದ್ದು ಫೈನಲ್ ಸ್ಪರ್ಧೆಗೆ ಉತ್ತಮ ಹಣಾಹಣಿ ಏರ್ಪಟ್ಟಿದೆ.

ಈ ಐವರಲ್ಲಿ ವಿಜೇತರು ಯಾರಾಗುತ್ತಾರೆ? ಎಂಬುದು ಎಲ್ಲರ ಕುತೂಹಲವಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು ಎಂದು ಜೀ ಕನ್ನಡ ಪ್ರಕಟಣೆ ತಿಳಿಸಿದೆ. ಜೀ ಕನ್ನಡ ಯಾವತ್ತೂ ತನ್ನ ಹೊಸ ಕಾರ್ಯಕ್ರಮಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುತ್ತದೆ. ಈ ಹಿಂದೆ ಯುವ ಗಾಯಕರನ್ನು ನಾಡಿಗೆ ಪರಿಚಯಿಸಿದ ಜೀ ಕನ್ನಡ ಈ ಸಾರಿ ಕರ್ನಾಟಕದಲ್ಲಿಯ ಗೃಹಿಣಿಯರ ಗಾಯನ ಪ್ರತಿಭೆಯನ್ನು ನಾಡಿಗೆ ಪರಿಚಯಿಸುವ ಪ್ರಯತ್ನ ಹೊಂದಿತ್ತು.

ಕರ್ನಾಟಕದ ಗೃಹಿಣಿಯರಿಗಾಗಿ ಸರಿಗಮಪ ಪ್ರಾರಂಭಿಸಿ ಯಶಸ್ವಿಯೂ ಆಗಿದೆ. ಈಗ ಈ ಕಾರ್ಯಕ್ರಮದ ಕೊನೆಯ ಹಂತಕ್ಕೆ ಸರಿಗಮಪ ತಲುಪಿದೆ. ಸರಿಗಮಪ ಕೊನೆಯ ಹಂತದಲ್ಲಿ ಐದು ಗೃಹಿಣಿಯರನ್ನು ಆಯ್ಕೆ ಮಾಡಲಾಗಿದೆ. ಈ ಐವರಲ್ಲಿ ಒಬ್ಬರನ್ನು ಸರಿಗಮಪ ಸ್ಪರ್ಧೆಯ ವಿಜೇತರನ್ನಾಗಿ ಆಯ್ಕೆ ಮಾಡಲಾಗುತ್ತದೆ.
ಪ್ರಥಮ ಮತ್ತು ದ್ವಿತೀಯ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಥಮ ವಿಜೇತೆಗೆ 2ಲಕ್ಷ ಹಾಗೂ ದ್ವಿತೀಯ ವಿಜೇತೆಗೆ ಒಂದು ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.

ಸರಿಗಮಪ ಫೈನಲ್ ಸ್ಪರ್ಧೆಗೆ ವಿಶೇಷ ನಿರ್ಣಾಯಕರಾಗಿ ರಾಜೇಶ್ ಕೃಷ್ಣನ್, ರಾಜು ಅನಂತಸ್ವಾಮಿ, ಎಂ.ಡಿ. ಪಲ್ಲವಿ, ಚೈತ್ತಾ, ಅಭಿಮಾನ್, ಸಂಗೀತಾ ಕಟ್ಟಿ ಭಾಗವಹಿಸಲಿದ್ದಾರೆ.

ಜೀ ಕನ್ನಡದ ಸರಿಗಮಪ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಫೈನಲ್ ಸ್ಪರ್ಧೆಯನ್ನು ಎದುರು ನೋಡುತ್ತಿದ್ದಾರೆ. ಉತ್ತಮ ಸ್ಪರ್ಧೆಯೇರ್ಪಟ್ಟಿರುವುದರಿಂದ ಯಾರು ವಿಜೇತರಾಗುತ್ತಾರೆ ಎಂಬುದು ಎಲ್ಲರ ಕುತೂಹಲವಾಗಿದೆ. ಅಂತಿಮಸ್ಫರ್ಧೆಗೆ ನಿರ್ಣಾಯಕರಾಗಿ ಖ್ಯಾತ ಸಂಗೀತಗಾರರಾದ ರಾಜೇಶ್ ರಾಮನಾಥ್, ಮಂಜುಳಾ ಗುರುರಾಜ್, ಮನೋಮೂರ್ತಿ, ಬಿ.ಜಯಶ್ರೀ ಭಾಗವಹಿಸಲಿದ್ದಾರೆ.

ಕರುನಾಡ ಶ್ರೀಮತಿಯರಿಗಾಗಿ ಪ್ರಾರಂಭಿಸಿರುವ ಗಾರ್ನಿಯರ್ ಪ್ರೂಕ್ಟಿಸ್ ಸರಿಗಮಪ ತನ್ನ ಕೊನೆಯ ಘಟ್ಟವನ್ನು ತಲುಪಿದೆ. ಕರ್ನಾಟಕದ ವಿವಿದೆಡೆಯಿಂದ ಬಂದಿರುವ ಸ್ಪರ್ಧಿಗಳಲ್ಲಿ ಐದು ಸ್ಪರ್ಧಿಗಳನ್ನು ಕೊನೆಯ ಹಂತಕ್ಕೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನಿಂದ ಸುಪ್ರಿಯಾ ರಾಮಕೃಷ್ಣನ್, ಮೈಸೂರಿನಿಂದ ರೇವತಿ ಕೆ.ಪಿ, ಬೆಳಗಾವಿಯಿಂದ ಅಮಿತಾ ರವಿಕಿರಣ್, ಶಿವಮೊಗ್ಗದಿಂದ ಸುಮತಿ ನಟರಾಜ್, ಮಂಗಳೂರಿನಿಂದ ಜಯಂತಿ ಭಟ್ ಕೊನೆಯ ಹಂತಕ್ಕೆ ಆಯ್ಕೆಯಾದ ಗೃಹಿಣಿಯರಾಗಿದ್ದಾರೆ.

ಜೀ ಗ್ರೂಪ್‌ನಿಂದ ಈ ಮೊದಲು ಹಿಂದಿಯಲ್ಲಿ ಪ್ರಾರಂಭವಾಗಿದ್ದ ಸರೆಗಮಪ ಇಡೀ ದೇಶದ ಸಂಗೀತ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿತ್ತು. ಕರ್ನಾಟಕದಲ್ಲಿ ಜೀ ಕನ್ನಡದ ಈ ಕಾರ್ಯಕ್ರಮ ಉತ್ತಮ ಗಾಯಕರನ್ನು ಕನ್ನಡಿಗರಿಗೆ ಪರಿಚಯಿಸಿತು. ಸರಿಗಮಪ ಕಾರ್ಯಕ್ರಮದಲ್ಲಿ ಈ ಹಿಂದೆ ಕರ್ನಾಟಕದ ರಾಜೇಶ್ ಕೃಷ್ಣನ್, ಎಂ.ಡಿ.ಪಲ್ಲವಿ ನಿರೂಪಕರಾಗಿ ಭಾಗವಹಿಸಿದ್ದರು. ಈಗ ಕರ್ನಾಟಕದ ಇನ್ನೊಂದು ಪ್ರತಿಭೆ ವಿಜಯ ಪ್ರಕಾಶ್ ನಿರೂಪಕರಾಗಿ ಭಾಗವಹಿಸುತ್ತಿದ್ದಾರೆ. ವಿಜಯ ಪ್ರಕಾಶ್ ಮೂಲತ: ಕನ್ನಡದವರು ಈಗಾಗಲೇ ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ಗಾಯಕರು. ಇತ್ತೀಚಿನ ಚೀನಿಕಮ್, ಸ್ವದೇಶ್, ಓಂಕಾರ್ ಚಿತ್ರಗಳಲ್ಲಿನ ಇವರ ಗಾಯನ ಪ್ರಸಿದ್ಧವಾಗಿವೆ.

ಕಾರ್ಯಕ್ರಮದ ನಿರ್ಣಾಯಕರಾಗಿ ಖ್ಯಾತ ಸಂಗೀತಗಾರರಾದ ರಾಜೇಶ್ ರಾಮನಾಥ್, ಮಂಜುಳಾ ಗುರುರಾಜ್, ಮನೋಮೂರ್ತಿ, ಬಿ.ಜಯಶ್ರೀ ಭಾಗವಹಿಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X