ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಂತೂಇಂತು ದೋಸ್ತಿ ಸರ್ಕಾರ ಬಿತ್ತು!ಮುಂದೇನು ಕಸರತ್ತು?
ಬೆಂಗಳೂರು, ನ.19 : ಏಳು ದಿನಗಳ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರ ಉರುಳಿ ಬಿದ್ದಿದೆ. ಯಡಿಯೂರಪ್ಪ ಏಳು ದಿನದ ಮುಖ್ಯಮಂತ್ರಿಯಾಗಿ ದಾಖಲೆ ಸೃಷ್ಟಿಸಿದ್ದಾರೆ. ಮುಂದೇನು ಎಂಬ ಕುತೂಹಲ ಈಗ ಮತ್ತೆ ಪ್ರತ್ಯಕ್ಷ.
ಮುಂದೇನಾಗಬಹುದು?
- ಹೊಸ ಜನಾದೇಶ ಪಡೆಯಲು ಬಿಜೆಪಿ ಪ್ರಯತ್ನ.
- ಜೆಡಿಎಸ್ ವಿರುದ್ಧ ಬಿಜೆಪಿ ವಾಗ್ದಾಳಿ.. ಮತ್ತೆ ಬಿಜೆಪಿ ಧರ್ಮಯಾತ್ರೆ. ಜೆಡಿಎಸ್ ವಂಚನೆಯನ್ನು ಮುಂದಿಟ್ಟುಕೊಂಡು ಮತ್ತೆ ಸಮರ. ಜನತಾ ನ್ಯಾಯಾಲಯದತ್ತ ಪಯಣ.
- ನಮ್ಮದೇನು ತಪ್ಪಿಲ್ಲ ಎಂದು ಜೆಡಿಎಸ್ ವಾದ ಮಾಡುತ್ತದೆ. ಬಿಜೆಪಿ ವಿರುದ್ಧ ವಾಕ್ ಸಮರ. ರಾಜ್ಯದೆಲ್ಲೆಡೆ ಬಹಿರಂಗ ಸಭೆ, ಪಕ್ಷದ ಸಂಘಟನೆ ಇತ್ಯಾದಿ.
- ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ರಾಜ್ಯಕ್ಕೆ ಅವಮಾನವಾಗಿದೆ ಎಂದು ಕಾಂಗ್ರೆಸ್ ಬೊಬ್ಬೆ ಹಾಕುತ್ತದೆ.
- ಕಾಂಗ್ರೆಸ್ ಮತ್ತು ಜೆಡಿಎಸ್ ಮರು ಮೈತ್ರಿಯ ಕಸರತ್ತು. ಕುಮಾರಸ್ವಾಮಿಗೆ ಸಿಎಂ ಪಟ್ಟ ಸಿಕ್ಕರೇ, ಕಾಂಗ್ರೆಸ್ ಮೈತ್ರಿಗೆ ಜೆಡಿಎಸ್ ಒಪ್ಪಬಹುದು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, November 19, 2007, 18:17 [IST]