ಸಂಜೆ 6ಗಂಟೆಗೆ ಮ್ಯಾಜಿಕ್ ನಡೆಯುತ್ತಾ ಯಡಿಯೂರಪ್ಪಾ?
ಬೆಂಗಳೂರು, ನ.19 : ಸಂಜೆ 6ಗಂಟೆ ತನಕ ತಾಳ್ಮೆಯಿಂದ ಕಾದು ನೋಡಿ ಎಂದು ಸುದ್ದಿಗಾರರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮಾರ್ಮಿಕವಾಗಿ ಹೇಳಿದ್ದಾರೆ. ನಾನು ರಾಜೀನಾಮೆ ಕೊಡುವುದಿಲ್ಲ. ನಾನೇಕೆ ರಾಜೀನಾಮೆ ನೀಡಲಿ? ಎಂದಿರುವ ಅವರು ವಿಶ್ವಾಸ ಮತ ಸಾಬೀತು ಪಡಿಸುವ ಬಗ್ಗೆ ಪುನರುಚ್ಛರಿಸಿದ್ದಾರೆ.
ವಿಧಾನಸೌಧದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಇಂದು ಬೆಳಗ್ಗೆ ಯಡಿಯೂರಪ್ಪ 20ನಿಮಿಷ ಮಾತುಕತೆ ನಡೆಸಿರುವುದು ಇನ್ನೊಂದು ವಿಶೇಷ. ಮಾತುಕತೆ ವಿವರಗಳು ಲಭ್ಯವಾಗಿಲ್ಲ. ವಿಶ್ವಾಸ ಮತದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಮತ್ತು ಚೆಲುವರಾಯ ಸ್ವಾಮಿ ಮಧ್ಯೆಯೂ ಚರ್ಚೆ ನಡೆದಿದೆ. ಬಾಲಕೃಷ್ಣ ಸೇರಿದಂತೆ ಕೆಲವು ಜೆಡಿಎಸ್ ಶಾಸಕರು ವಿಪ್ ಉಲ್ಲಂಘಿಸುವುದಾಗಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ ಸಿಂಗ್ ಮಾತ್ರ, ಜೆಡಿಎಸ್ ಜೊತೆಗಿನ ಮರುಮೈತ್ರಿಯನ್ನು ತಳ್ಳಿಹಾಕಿದ್ದಾರೆ. ಜೆಡಿಎಸ್ ಮತ್ತೆ ನಮ್ಮನ್ನು ವಂಚಿಸಿದೆ ಎಂದಿರುವ ಅವರು, ಮಧ್ಯಂತರ ಚುನಾವಣೆಗೆ ಆಗ್ರಹಿಸಿದ್ದಾರೆ. ಚುನಾವಣೆಗೆ ಸಿದ್ದವಾಗುವಂತೆ ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ಅಂತಿಮ ಕ್ಷಣದಲ್ಲಿ ಪವಾಡವನ್ನು ಬಿಜೆಪಿ ನಿರೀಕ್ಷಿಸಿದೆ.
(ದಟ್ಸ್ ಕನ್ನಡ ವಾರ್ತೆ)