ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪಗೆ ಪಟ್ಟ ಒಲಿಯಲು ಏನು ಕಾರಣ ಗೊತ್ತೇ?!
ಬೆಂಗಳೂರು, ಅ. 28: ಬಿಜೆಪಿ ನಾಯಕ ಮಾಜಿ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದರಿಂದ ಅವರಿಗೆ ಸಿಎಂ ಪಟ್ಟ ಒಲಿಯುವಂತಾಗಿದೆ ಎಂದು ಸುದ್ದಿ ಹರಡಿದೆ.
ಆಪ್ತ ಸಲಹೆಗಾರರ ಹಾಗೂ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ B.S. Yediyurappa ಎಂದಿದ್ದ ತಮ್ಮ ಹೆಸರನ್ನು B.S. Yeddyurappa ಎಂದು ಬದಲಾಯಿಸಿಕೊಂಡು ಅ.11ರಂದು ಯಡಿಯೂರಪ್ಪ ನವರು ಪ್ರಮಾಣಪತ್ರ ಸಲ್ಲಿಸಿದ್ದರು.ಇದಾದ ಎರಡು ವಾರದೊಳಗೆ ಜೆಡಿಎಸ್ ಮರು ಮೈತ್ರಿಗೆ ಸಿದ್ಧವಾಗಿ, ಸಿಎಂ ಪಟ್ಟ ಒಲಿದು ಬಂದಿದೆ.
ಸಾರ್ವಜನಿಕರು ಯಡಿಯೂರಪ್ಪ ಅವರನ್ನು ಸಂಪರ್ಕಿಸುವಾಗ ಹೊಸ ಅಧಿಕೃತ ನಾಮಧೇಯವನ್ನು ಬಳಸುವಂತೆ ಯಡಿಯೂರಪ್ಪನವರ ಕಚೇರಿ ವಕ್ತಾರರು ಪ್ರಕಟಣೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, October 28, 2007, 14:58 [IST]