ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪ್ತ ಸಲಹೆಗಾರರ ಜೊತೆ ರಾಜ್ಯಪಾಲರಮಹತ್ವದ ಸಭೆ

By Staff
|
Google Oneindia Kannada News

ಬೆಂಗಳೂರು, ಅ.28: ರಾಜಭವನದಲ್ಲಿ ಇಂದು(ಅ.28) 12 ಗಂಟೆ ಸುಮಾರಿಗೆ ವ್ಯವಹಾರಿಕ ಮಟ್ಟದ ಸಭೆ ನಡೆಯಲಿದೆ.

ಈ ಸಭೆಯಲ್ಲಿ ರಾಜ್ಯಪಾಲರ ಆಪ್ತ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿ ಪಿ. ಬಿ .ಮಹಿಷಿ ಹಾಗೂ ಹಿರಿಯ ಸರ್ಕಾರಿ ಅಧಿಕಾರಗಳು ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ ರಾಜಕೀಯ ವಿಶ್ಲೇಷಕ ಪಿ. ಆಚಾರ್ಯ ಅವರನ್ನು ರಾಜಭವನಕ್ಕೆ ಕರೆಸಿಕೊಳ್ಳಲಾಗಿದೆ.

ರಾಜ್ಯ ರಾಜಕರಣದಲ್ಲಿ ಆದ ಬದಲಾವಣೆಗೆ ತಕ್ಕಂತೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರಿಗೆ ಮೂವರು ಆಪ್ತ ಸಲಹೆಗಾರರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಇಂದಿನ ಸಭೆಯಲ್ಲಿ ಆಪ್ತ ಸಲಹೆಗಾರರು ಮಹತ್ವದ ಪಾತ್ರ ವಹಿಸಲಿದ್ದಾರೆ . ಈ ಸಭೆಯನ್ನುಸಚಿವ ಸಂಪುಟ ಮಟ್ಟದ ಸಭೆ ಎನ್ನಬಹುದುಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಕಾರ್ಯದರ್ಶಿಯಾಗಿದ್ದಪಿ.ಪಿ. ಪ್ರಭು, ಕೇಂದ್ರ ವಿದೇಶಾಂಗ ವ್ಯವಹಾರ ಕಾರ್ಯದರ್ಶಿ ಎಸ್ .ಕೃಷ್ಣ ಕುಮಾರ್ ಹಾಗೂ ಸಂಶೋಧನೆ ಹಾಗೂ ವಿಶ್ಲೇಷಣೆ ವಿಭಾಗದ ಮುಖ್ಯಸ್ಥ ಪಿ. ಕೆ. ಹೋರ್ಮಿಸ್ ರಾಜ್ಯಪಾಲರಿಗೆ ಆಪ್ತ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರಪತಿ ಅಧಿಕಾರವನ್ನು ನಿಭಾಯಿಸುತ್ತಿರುವ ರಾಜ್ಯಪಾಲರ ಆಡಳಿತಕ್ಕೆ ಅನುಕೂಲಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲರ ಕಾರ್ಯದರ್ಶಿ ಶಾರದಾ ಸುಬ್ರಮಣ್ಯಂ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X