ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಈ ವಾರವಿಡೀ ಮಳೆ; ಕೈಯಲ್ಲಿ ಯಾವುದಕ್ಕೂ ಇರಲಿ ಛತ್ರಿ
ಬೆಂಗಳೂರು, ಅ.24 : ರಾಜ್ಯದ ವಿವಿಧೆಡೆ ಮತ್ತೆ ಮಳೆ. ಹವಾಮಾನ ಇಲಾಖೆ ವರದಿಗಳ ಪ್ರಕಾರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾನುವಾರದವರೆಗೆ ಮಳೆ ಬೀಳಲಿದೆ. ಹೀಗಾಗಿ ಕೈಯಲ್ಲೊಂದು ಛತ್ರಿ ಇದ್ದರೇ ಒಳ್ಳೆಯದು. ಮೈಮೇಲೆ ರೈನ್ ಕೋಟ್ ಇದ್ದರೆ ಇನ್ನೂ ಒಳ್ಳೆಯದು.
ತುಮಕೂರು, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ವಾರವಿಡಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)
Story first published: Wednesday, October 24, 2007, 11:39 [IST]