ರಾಜ್ ನೆನಪಿನ ರಸಸಂಜೆಗೆ ಬನ್ನಿ ಅಂಧರಿಗೆ ಬೆಂಬಲ ನೀಡಿ
ಬೆಂಗಳೂರು, ಅ 22: ಐಡಿಎಲ್ ಫೌಂಡೇಷನ್ ಸಹಾಯಾರ್ಥವಾಗಿ ಡಾ. ರಾಜ್ ಸವಿನೆನಪಿನ ಸಂಗೀತ ರಸಸಂಜೆ ಕಾರ್ಯಕ್ರಮ ಇಂದು(ಅ.22) ಸಂಜೆ ಅರಮನೆ ಮೈದಾನದಲ್ಲಿ ನಡೆಯಲಿದೆ.
ಡಾ.ರಾಜ್ ಕುಟುಂಬದವರಿಂದ ಉದ್ಘಾಟನೆಗೊಳ್ಳುವ ಈ ಕಾರ್ಯಕ್ರಮಕ್ಕೆ ವೈಬ್ರೆಂಟ್ ವೆನ್ಯೂ ಸಂಸ್ಥೆ, ಕಸ್ತೂರಿ ಚಾನೆಲ್ ಹಾಗೂ ರೇಡಿಯೋ ಮಿರ್ಚಿ ಎಫ್ ಎಂ98.3ವಾಹಿನಿಗಳ ಸಹಕಾರ ದೊರೆತಿದೆ.
ನಾಯಕ -ಗಾಯಕ ಎಂಬ ವಿನೂತನ ಕಾರ್ಯಕ್ರಮದಲ್ಲಿ ಐಡಿಎಲ್ ದೃಷ್ಟಿ ವಿಕಲಚೇತನರ ವಾದ್ಯವೃಂದದಿಂದ ಹಾಡುಗಾರಿಕೆ ಇರುತ್ತದೆ. ಗಾಯಕಿ ಅರ್ಚನಾ ಉಡುಪ, ಸುರೇಖಾ, ಗಾಯಕ ವಿಷ್ಣು, ಗಂಗೋತ್ರಿ ರಂಗಸ್ವಾಮಿ ಮುಂತಾದವರು ಕೂಡ ಗಾನಸುಧೆ ಹರಿಸಲಿದ್ದಾರೆ.
ಶ್ಯಾಡೋಸ್ ನೃತ್ಯ ತಂಡದಿಂದ ಡಾ. ರಾಜ್ ಹಾಡುಗಳಿಗೆ ನೃತ್ಯ, ಡಿಜೆ ಗೋಪು ಹಾಗೂ ಡ್ರಮ್ಮರ್ ಗೋಪಿಯವರ ರೀಮಿಕ್ಸ್ ಹಾಡುಗಳು ಈ ಕಾರ್ಯಕ್ರಮದ ಮತ್ತೊಂದು ಆಕರ್ಷಣೆ.
ನಿವೃತ್ತ ಪೊಲೀಸ್ ಆಯುಕ್ತ ಮರಿಸ್ವಾಮಿ, ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಸಿ.ರಾಮಮೂರ್ತಿ ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸ್ಠಳ: ಅರಮನೆ ಮೈದಾನ, ಮೇಕ್ರಿ ವೃತ್ತ
ಸಮಯ: ಸಂಜೆ 6
ಪ್ರವೇಶ ಉಚಿತ
ಹೆಚ್ಚಿನ
ವಿವರಗಳಿಗಾಗಿ
ಸಂಪರ್ಕಿಸಿ:
ಸಂಗೀತಾ
:
98452
52320
ಪಾಲ್
:
93425
30290
ವಿ.ಸೂ:
ಈ
ಕಾರ್ಯಕ್ರಮದಿಂದ
ಬರುವ
ಸಹಾಯಧನವನ್ನು
ಐಡಿಎಲ್
ನ
ಒಂದು
ಸಾವಿರ
ದೃಷ್ಟಿ
ವಿಕಲಚೇತನರ
ಊಟೋಪಹಾರಕ್ಕಾಗಿ
ವಿನಿಯೋಗಿಸಲಾಗುತ್ತದೆ.
(ದಟ್ಸ್ ಕನ್ನಡ ವಾರ್ತೆ)