ಲೋಕಸಭೆ ಚುನಾವಣೆ ಭೀತಿಯಿಂದ ಪಟ್ಟುಬಿಟ್ಟ ಕಾಂಗ್ರೆಸ್!
ಬೆಂಗಳೂರು, ಅ.13 : ಲೋಕಸಭೆ ಮಧ್ಯಂತರ ಚುನಾವಣೆಗೆ ತೆರೆ ಎಳೆಯುವಂತೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ರಾಗಬದಲಿಸಿದ್ದಾರೆ. ಸರ್ಕಾರ ಮುಂದುವರಿಸಲು ಅಣು ಒಪ್ಪಂದವನ್ನು ಬಿಡಲೂ ಸಹಾ ಸಿದ್ಧ ಎಂಬ ಭಾವ ವ್ಯಕ್ತವಾಗಿದೆ.
ಕಾಂಗ್ರೆಸ್ ಹೇಳಿಕೆಗಳಿಂದ ಎಡಪಕ್ಷಗಳಿಗೆ ಖುಷಿಯಾಗಿದೆ. ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಸಭೆಯಲ್ಲಿ ನಡೆದ ಸಂವಾದದಲ್ಲಿ ಸೋನಿಯಾ ಮತ್ತು ಮನಮೋಹನ್, ಸರ್ಕಾರದ ಸ್ಥಿರತೆಯನ್ನು ಪ್ರದರ್ಶಿಸಿದ್ದಾರೆ. ಜೊತೆಗೆ ಸಂಪುಟ ಪುನಾರಚನೆ ಮಾಡಿ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.
ಸೋನಿಯಾ ಮತ್ತು ಮನಮೋಹನ್ ಸ್ಪಷ್ಟ ಮಾತುಗಳು :
*ಲೋಕಸಭೆಗೆ ಸದ್ಯಕ್ಕೆ ಮಧ್ಯಂತರ ಚುನಾವಣೆ ಇಲ್ಲ. ಈ ಸರ್ಕಾರ ಪೂರ್ಣಾವಧಿ ಪೂರೈಸಲಿದೆ.
*ಎಡ ಪಕ್ಷಗಳ ಟೀಕೆಗಳಲ್ಲೂ ಸತ್ಯವಿದೆ. ಅಣು ಒಪ್ಪಂದದ ವಿಷಯದಲ್ಲಿ ಸರ್ಕಾರವನ್ನು ಬಲಿಕೊಡುವುದಿಲ್ಲ. ಅಣು ಒಪ್ಪಂದ ಪೂರ್ಣವಾಗದಿದ್ದರೇ , ಏನೂ ಪ್ರಳಯವಾಗುವುದಿಲ್ಲ.
*ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ. ಭವಿಷ್ಯಕ್ಕಾಗಿ ಸದ್ಯದ ಸಂಘರ್ಷಗಳ ನಿವಾರಿಸಿಕೊಳ್ಳಬೇಕು.
(ಏಜನ್ಸೀಸ್)