ವಿಧಾನಸೌಧಕ್ಕೆ ಬಂದ ರಾಜ್ಯಪಾಲರಿಗೆ ಕಪ್ಪು ಧ್ವಜದ ಸ್ವಾಗತ!
ಬೆಂಗಳೂರು, ಅ.12 : ರಾಷ್ಟ್ರಪತಿ ಆಡಳಿತ ಹೇರಿದ ಕ್ರಮವನ್ನು ವಿರೋಧಿಸಿರುವ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ವಿರೋಧವನ್ನು ಶುಕ್ರವಾರ(ಅ.12) ವ್ಯಕ್ತಪಡಿಸಿದರು.
ರಾಜ್ಯಕ್ಕೆ ರಾಷ್ಟ್ರಪತಿ ಆಡಳಿತ ಬೇಕಿರಲಿಲ್ಲ. ಮೋಸದಿಂದ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ನಾವಿದನ್ನು ವಿರೋಧಿಸುತ್ತೇವೆ. ರಾಜ್ಯಪಾಲರು ವಿಧಾನಸೌಧಕ್ಕೆ ಬರಬಾರದು. ಯಾರೊಂದಿಗೂ ಚರ್ಚಿಸದೇ, ಏಕಾಏಕಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲರು ಶಿಫಾರಸು ಸಲ್ಲಿಸಿದ್ದು ಸಲ್ಲದು. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ವಾಟಾಳ್ ಹೇಳಿದರು. ರಾಜ್ಯಪಾಲರು ಮುಖ್ಯಮಂತ್ರಿಗಳ ಕೊಠಡಿ ಪ್ರವೇಶಿಸಿದ್ದನ್ನು ಕಂಡು ವಾಟಾಳ್ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲ
ರಾಮೇಶ್ವರ
ಠಾಕೂರ್
ವಿಧಾನಸೌಧಕ್ಕೆ
ಇಂದು
ಮೊದಲ
ಸಲ
ಬಂದಿದ್ದರು.
ರಾಷ್ಟ್ರಪತಿ
ಆಡಳಿತವನ್ನು
ಅನುಷ್ಠಾನಗೊಳಿಸಲು,
ರಾಜ್ಯದ
ಆಡಳಿತ
ಸೂತ್ರವನ್ನು
ಕೈಯಲ್ಲಿಡಿಯಲು
ರಾಜ್ಯಪಾಲರು,
ರಾಜ್ಯ
ಕಾರ್ಯದರ್ಶಿಗಳು
ಮತ್ತು
ಹಿರಿಯ
ಅಧಿಕಾರಿಗಳ
ಉನ್ನತಮಟ್ಟದ
ಸಭೆಯನ್ನು
ವಿಧಾನಸೌಧದಲ್ಲಿ
ನಡೆಸಿದರು.
ವಿಧಾನಸೌಧ
ಪ್ರವೇಶಿಸುವ
ಮುನ್ನ
ರಾಜ್ಯಪಾಲರನ್ನು
ಹಿರಿಯ
ಅಧಿಕಾರಿಗಳು
ಮತ್ತು
ಮುಖ್ಯ
ಕಾರ್ಯದರ್ಶಿ
ಪಿ.ಬಿ.ಮಹಿಷಿ
ಮತ್ತು
ಹಿರಿಯ
ಪೊಲೀಸ್
ಅಧಿಕಾರಿಗಳು
ಸ್ವಾಗತಿಸಿದ್ದರು.
(ಯುಎನ್ಐ)