ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆ.ಹೆಚ್.ಪಟೇಲ್ ಪುತ್ರ ಮಹಿಮಾರಿಂದ ಪ್ರಾದೇಶಿಕ ಪಕ್ಷ

By Staff
|
Google Oneindia Kannada News

ಬೆಂಗಳೂರು, ಅ.12 : ಬಿಜೆಪಿಗೆ ಅಧಿಕಾರ ಹಸ್ತಾಂತರವಾಗದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಜೆಡಿಎಸ್ ಶಾಸಕ ಮಹಿಮಾ ಪಟೇಲ್, ಪಕ್ಷಕ್ಕೆ ವಿದಾಯ ಹೇಳಿದ್ದಾರೆ.

ವಚನ ಭ್ರಷ್ಟರ ಜೊತೆ ಇರಲು ನನಗೆ ಮುಜುಗರವಾಗುತ್ತಿದೆ. ಜೆಡಿಎಸ್ ನಲ್ಲಿನ ಉಸಿರುಕಟ್ಟಿದ ವಾತಾವರಣದಿಂದಾಗಿ ನಾನು ಹೊರಬಂದಿದ್ದೇನೆ ಎಂದಿರುವ ಮಹಿಮಾ ಪಟೇಲ್, ರಾಜೀನಾಮೆ ಪತ್ರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಗೆ ಕಳುಹಿಸಿದ್ದಾರೆ. ರಾಜ್ಯದಲ್ಲಿ ನಮ್ಮ ಪರವಾಗಿ ಲಕ್ಷಾಂತರ ಬೆಂಬಲಿಗರಿದ್ದಾರೆ. ಅವರನ್ನು ಸಂಘಟಿಸಿ ಸುವರ್ಣಯುಗ ಎಂಬ ಹೊಸ ಪಕ್ಷ ಸ್ಥಾಪಿಸುವುದಾಗಿ ಮಹಿಮಾ ಘೋಷಿಸಿದ್ದಾರೆ.

ಜೆಡಿಎಸ್ ಗುರುತಿನಡಿ ಗೆಲುವು ಸಾಧಿಸಿದ್ದ ಮಹಿಮಾ ಪಟೇಲ್, ಈಗ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರ ಸದಸ್ಯತ್ವ ರದ್ದಾಗುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಅಧಿಕಾರ ಹಸ್ತಾಂತರವಾಗದ ಬಗ್ಗೆ ಅಸಮಾಧಾನದಿಂದ ಮಾಜಿ ಸಂಸದ ವಿಜಯ ಸಂಕೇಶ್ವರ್, ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X