ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನ ಗೇಲಿ ಮಾಡಿದ ಕರುಣಾನಿಧಿ ವಿರುದ್ಧ ಕ್ರಿಮಿನಲ್ ಕೇಸ್

By Staff
|
Google Oneindia Kannada News

Tamilnadu Chief Minister M. Karunanidhiಬೆಂಗಳೂರು, ಅ.3 : ರಾಮ ಯಾರು? ಅವನು ಯಾವ ಕಾಲೇಜಿನಲ್ಲಿ ಓದಿದ್ದ? ಇಷ್ಟಕ್ಕೂ ರಾಮ ಒಬ್ಬ ಕುಡುಕನಾಗಿದ್ದ.. ಹೀಗೆಲ್ಲ ಶ್ರೀರಾಮನನ್ನು ನಿಂದಿಸಿದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ವಿರುದ್ಧ, ಬೆಂಗಳೂರಿನ ಸ್ಥಳೀಯ ಕೋರ್ಟ್‌ನಲ್ಲಿ ಕೇಸು ದಾಖಲಾಗಿದೆ.

ವಿಮಲನಾಥನ್, ರಾಜಶೇಖರ್ ಮತ್ತು ಚೇರನ್ ಎಂಬ ನಾಗರೀಕರೇ, ಕರುಣಾನಿಧಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದವರು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿರುವ ಕರುಣಾನಿಧಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ನ್ಯಾಯಾಲಯವನ್ನು ಅವರು ಕೋರಿದ್ದಾರೆ. ಅರ್ಜಿದಾರರ ಅಹವಾಲನ್ನು ಆಲಿಸಿದ ಹೆಚ್ಚುವರಿ ಮುಖ್ಯ ದಂಡಾಧಿಕಾರಿ ರಘುನಾಥ್, ಈ ಪ್ರಕರಣದ ವಿಚಾರಣೆಯನ್ನು ಅಕ್ಟೊಬರ್ 11ಕ್ಕೆ ಮುಂದೂಡಿದ್ದಾರೆ.

ಈ ಮಧ್ಯೆಯೂ ತಮ್ಮ ವಿವಾದಾಸ್ಪದ ಹೇಳಿಕೆಯನ್ನು ಕರುಣಾನಿಧಿ, ಸಾರ್ವಜನಿಕ ವೇದಿಕೆಗಳಲ್ಲಿ ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ಪೂರಕ ಓದಿಗೆ :
ರಾಮನೇ ಇರಲಿಲ್ಲ ಅನ್ನುವುದಾದರೆ ಮುರುಗ ಎಲ್ಲಿಂದ ಬಂದ?
ಪ್ರಧಾನಿ, ಸೋನಿಯಾ ಮತ್ತು ಕರುಣಾನಿಧಿ ವಿರುದ್ಧ ದೂರು
ಶ್ರೀರಾಮನ ಬಗ್ಗೆ ಲಘುವಾದ ಮಾತು ತಪ್ಪು : ದೇವೇಗೌಡ
ಪ್ರಧಾನಿ, ಸೋನಿಯಾ ಮತ್ತು ಕರುಣಾನಿಧಿ ವಿರುದ್ಧ ದೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X