ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮನ ಅಸ್ತಿತ್ವದ ನಿರಾಕರಣೆ ಕುರಿತು ವಿಚಾರ ಗೋಷ್ಠಿ
ಬೆಂಗಳೂರು, ಸೆ.29 : 'ರಾಮನ ಅಸ್ತಿತ್ವದ ನಿರಾಕರಣೆ-ಒಂದು ರಾಷ್ಟ್ರೀಯ ಅಪಚಾರ" ಎಂಬ ವಿಷಯದ ಬಗ್ಗೆ ವಿಚಾರ ಗೋಷ್ಠಿಯನ್ನು 'ಮಂಥನ' ಸಂಸ್ಥೆ ಆಯೋಜಿಸಿದೆ.
ವಿಚಾರ ಗೋಷ್ಠಿಯಲ್ಲಿ ನಾಡಿನ ಖ್ಯಾತ ಚಿಂತಕರು ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣವು ಇದೇ ಮಂಗಳವಾರ ಅಕ್ಟೋಬರ್ 2ರಂದು ಗೋಖಲೆ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಶ್ರೀಹರ್ಷ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೊ. ಕೆ.ಎಸ್. ನಾರಾಯಣಾಚಾರ್ಯ, ಡಾ. ಎಂ.ಚಿದಾನಂದಮೂರ್ತಿ, ಹೆಚ್.ಎನ್. ನಂಜೇಗೌಡ, ಡಾ. ಎನ್.ಎಸ್. ರಾಜಾರಾಂ, ಪ್ರೊ. ಮುಮ್ತಾಜ್ ಆಲಿಖಾನ್, ಮುಖ್ಯಮಂತ್ರಿ ಚಂದ್ರು, ಪ್ರೊ. ಪಿ.ವಿ. ಕೃಷ್ಣಭಟ್ ವಿಚಾರಗೋಷ್ಠಿಯಲ್ಲಿ ಭಾಗವಹಿಸುವ ಚಿಂತಕರು.
ಕಾರ್ಯಕ್ರಮದ ವಿವರ
ದಿನಾಂಕ : 02.10.2007
ಸಮಯ : ಬೆಳಗ್ಗೆ 10 ಗಂಟೆಗೆ
ಸ್ಥಳ
:
ಗೋಖಲೆ
ಸಾರ್ವಜನಿಕ
ವಿಚಾರ
ಸಂಸ್ಥೆ
ಬಸವನಗುಡಿ
ರಸ್ತೆ,
ಬೆಂಗಳೂರು.
(ದಟ್ಸ್ಕನ್ನಡ ವಾರ್ತೆ)
Comments
Story first published: Saturday, September 29, 2007, 13:21 [IST]