ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನನೊಂದು ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ: ಆಡ್ವಾಣಿ

By Staff
|
Google Oneindia Kannada News

Pankaj Advani rejects Ekalavya awardಬೆಂಗಳೂರು, ಸೆ.29 : ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಆಡ್ವಾಣಿ ತಮಗೆ ಸಂದ ಪುರಸ್ಕಾರವನ್ನು ತಿರಸ್ಕರಿಸಿದ್ದಾರೆ.

4 ವರ್ಷಗಳ ನಂತರ 85 ಮಂದಿ ಕ್ರೀಡಾಳುಗಳು ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶನಿವಾರ (ಸೆ.29) ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಅರ್ಜುನ ಮತ್ತು ಖೇಲ್ ರತ್ನ ಪ್ರಶಸ್ತಿಗಳನ್ನು ಪಡೆದ ಬಳಿದ ಏಕಲವ್ಯ ಬರುತ್ತಿದೆ. ಈ ಮುಂಚೆಯೇ ಕೊಟ್ಟಿದ್ದರೆ ಸ್ವೀಕರಿಸುತ್ತಿದ್ದೆ. ಈಗ ತುಂಬಾ ವಿಳಂಬವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನನ್ನ ಸಾಧನೆ ಉತ್ತುಂಗಕ್ಕೇರಿದೆ. ಇದನ್ನು ಸರಕಾರ ಗುರುತಿಸಿಲ್ಲ. ಮನನೊಂದು ಪ್ರಶಸ್ತಿಯನ್ನು ತಿರಸ್ಕರಿಸುವ ನಿರ್ಧಾರಕ್ಕೆ ಬರುತ್ತಿದ್ದೇನೆ ಎಂದು ಆಡ್ವಾಣಿ ಹೇಳಿದ್ದಾರೆ.

ಪ್ರಶಸ್ತಿ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ನ್ಯಾಯ ವಿಳಂಬವಾದರೆ ನ್ಯಾಯವನ್ನೇ ನಿರಾಕರಿಸುವಂತೆ ಏಕಲವ್ಯ ಪ್ರಶಸ್ತಿ ತಡವಾಗಿ ಕೊಡುತ್ತಿರುವುದರಿಂದ ಅದನ್ನು ತಿರಸ್ಕರಿಸುತ್ತಿದ್ದೇನೆ ಎಂದು ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

(ದಟ್ಸ್‌ಕನ್ನಡ ವಾರ್ತೆ)

ಪೂರಕ ಓದಿಗೆ:
ಸನ್ಮಾನಿಸಿ ಎಂದು ಪ್ರತಿ ಆಟಗಾರರು ಇವರಿಗೆ ಭಿಕ್ಷೆ ಬೇಡಬೇಕೆ?
ಚಕ್‌ದೆ ಇಂಡಿಯಾ ಪರಿಣಾಮ : ಹಾಕಿ ತಂಡಕ್ಕೆ ಬಹುಮಾನ
ಕ್ರಿಕೆಟ್ ವೀರರಿಗೆ ಬಹುಮಾನ : ಹಾಕಿ ಆಟಗಾರರ ದಂಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X