ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆ ಹಾಗೂ ದರಿದ್ರ ರಸ್ತೆಗಳಿಂದಾಗಿ ಸಮ್ಮೇಳನ ಮುಂದಕ್ಕೆ
ಬೆಂಗಳೂರು, ಸೆ.26 : ಉಡುಪಿಯಲ್ಲಿ ಅ.25ರಿಂದ ಆರಂಭವಾಗಬೇಕಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು, ಡಿ.12ಕ್ಕೆ ಮುಂದೂಡಲಾಗಿದೆ.
ಕರಾವಳಿಯಲ್ಲಿ ನಿಲ್ಲದ ಮಳೆಯಿಂದಾಗಿ ಸಮ್ಮೇಳನದ ಸಿದ್ಧತೆಗೆ ತೊಡಕಾಗಿದೆ. ಜೊತೆಗೆ ರಸ್ತೆಗಳು ಹಾಳಾಗಿವೆ. ಹೀಗಾಗಿ ಸಮ್ಮೇಳನವನ್ನು ಮುಂದೂಡುತ್ತಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಡಾ.ವಿ.ಎಸ್.ಆಚಾರ್ಯ ಅವರ ಸಲಹೆಯನ್ವಯ ಸಮ್ಮೇಳನವನ್ನು ಮುಂದೂಡಿದ್ದೇವೆ. ಸಾಹಿತ್ಯಾಭಿಮಾನಿಗಳು ಸಹಕರಿಸಬೇಕು ಎಂದು ಚಂಪಾ ಕೋರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, September 26, 2007, 11:27 [IST]