ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಹಾಗೂ ದರಿದ್ರ ರಸ್ತೆಗಳಿಂದಾಗಿ ಸಮ್ಮೇಳನ ಮುಂದಕ್ಕೆ

By Staff
|
Google Oneindia Kannada News

ಬೆಂಗಳೂರು, ಸೆ.26 : ಉಡುಪಿಯಲ್ಲಿ ಅ.25ರಿಂದ ಆರಂಭವಾಗಬೇಕಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು, ಡಿ.12ಕ್ಕೆ ಮುಂದೂಡಲಾಗಿದೆ.

ಕರಾವಳಿಯಲ್ಲಿ ನಿಲ್ಲದ ಮಳೆಯಿಂದಾಗಿ ಸಮ್ಮೇಳನದ ಸಿದ್ಧತೆಗೆ ತೊಡಕಾಗಿದೆ. ಜೊತೆಗೆ ರಸ್ತೆಗಳು ಹಾಳಾಗಿವೆ. ಹೀಗಾಗಿ ಸಮ್ಮೇಳನವನ್ನು ಮುಂದೂಡುತ್ತಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಡಾ.ವಿ.ಎಸ್.ಆಚಾರ್ಯ ಅವರ ಸಲಹೆಯನ್ವಯ ಸಮ್ಮೇಳನವನ್ನು ಮುಂದೂಡಿದ್ದೇವೆ. ಸಾಹಿತ್ಯಾಭಿಮಾನಿಗಳು ಸಹಕರಿಸಬೇಕು ಎಂದು ಚಂಪಾ ಕೋರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X