ಹೃದಯ ತಪಾಸಣೆ ದರಗಳಲ್ಲಿ ಭಾರೀ ಕಡಿತ! ಈಗಲೇ ಓಡಿ
ಬೆಂಗಳೂರು ಸೆ.25 : ರಿಯಾಯಿತಿ ದರದಲ್ಲಿ ಹೃದಯ ತಪಾಸಣೆ. ಹೌದು, ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಸೆ. 30ರಂದು ಬೆಂಗಳೂರಿನಲ್ಲಿ ಕಡಿಮೆ ದರದಲ್ಲಿ ಹೃದಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಆಸಕ್ತಿವುಳ್ಳವರು, ನಲವತ್ತು ದಾಟಿದವರು, ಅತಿಯಾದ ಧೂಮಪಾನ ಮಾಡುವವರು, ಅನುವಂಶಿಕವಾಗಿ ಹೃದಯ ಸಂಬಂಧಿ ಕಾಯಿಲೆಯನ್ನು ಪಡೆದವರು ಮತ್ತು ಕಾಲಕಾಲಕ್ಕೆ ಅಂಗಾಂಗಗಳ ಮೇಂಟನೆನ್ಸ್ ಅನ್ನು ಮುತವರ್ಜಿಯಿಂದ ಮಾಡಿಕೊಳ್ಳುವವರು ಈ ಶಿಬಿರದಲ್ಲಿ ಅಗತ್ಯ ಭಾಗಿಯಾಗಬಹುದು.
ನಾರಾಯಣ ಹೃದಯಾಲಯ ಮತ್ತು ಎಂ.ಎಸ್. ರಾಮಯ್ಯ ಆಸ್ಪತ್ರೆ ಜಂಟಿಯಾಗಿ ಆರಂಭಿಸಿರುವ 'ಎಂ.ಎಸ್. ರಾಮಯ್ಯ ನಾರಾಯಣ ಹೃದಯಾಲಯ ಕೇಂದ್ರ'ವು ಎಂ.ಎಸ್. ರಾಮಯ್ಯ ಸ್ಮಾರಕ ಆಸ್ಪತ್ರೆಯಲ್ಲಿರುವ ಗೋಕುಲ ಲ್ಯಾಬೋರೇಟರಿ ಸಹಯೋಗದೊಂದಿದೆ ಹಮ್ಮಿಕೊಂಡಿರುವ ಈ ಶಿಬಿರದಲ್ಲಿ ಒಬ್ಬರಿಗೆ 1000ರೂ, ಇಬ್ಬರಿಗೆ 1500 ರೂ.ದರದಲ್ಲಿ ತಪಾಸಣೆ ಶಿಬಿರ ಆಯೋಜಿಸಿದೆ.
ಈ ವಿಶೇಷ ದರಗಳಲ್ಲಿ ನಿಮಗೆ ಏನೇನು ದೊರೆಯುತ್ತದೆ ಎಂದರೆ : ಇಸಿಜಿ, ರಕ್ತ ಪರೀಕ್ಷೆ, ಕ್ಷ-ಕಿರಣ, ಎಕೋಕಾರ್ಡಿಯೋಗ್ರಾಮ್ ಮತ್ತಿತರ ಅಗತ್ಯ ತಪಾಸಣೆಗಳೊಂದಿಗೆ ತಜ್ಞವೈದ್ಯರ ಸಲಹೆಯನ್ನೂ [consultation] ಪಡೆಯಬಹುದು. ಪಾಲ್ಗೊಳ್ಳ ಬಯಸುವ ಮಹಾಜನತೆ, ಹೆಸರು ನೊಂದಾಯಿಸಿಕೊಳ್ಳಲು ಈ ನಂಬರುಗಳನ್ನು ಬಳಸಬೇಕು. 99725 77901, 99008 09055.
(ದಟ್ಸ್ ಕನ್ನಡ ವಾರ್ತೆ)