ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಶವಂತಪುರದ ಮೆಟ್ರೊನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ?
ಬೆಂಗಳೂರು, ಸೆಪ್ಟೆಂಬರ್ 24 : ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದರು ಎಂಬ ಆರೋಪದ ಹಿನ್ನಲೆಯಲ್ಲಿ ಯಶವಂತಪುರದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಯಶವಂತಪುರದ ಮೆಟ್ರೊ ಮಳಿಗೆಯ ಮುಂದಿನ ಐದು ಧ್ವಜಗಳಲ್ಲಿ ಒಂದಾದ ರಾಷ್ಟ್ರಧ್ವಜ ಹರಿದು ಹೋಗಿತ್ತು. ಇದನ್ನು ಕಂಡ ಸಾರ್ವಜನಿಕರು ಭಾನುವಾರ(ಸೆ.23)ಪ್ರತಿಭಟಿಸಿದರು. ಕ್ಷಮೆ ಕೋರುವಂತೆ ಮೆಟ್ರೊ ಸಿಬ್ಬಂದಿಯನ್ನು ಆಗ್ರಹಿಸಿದರು. ಅಲ್ಲಿ ಯಾವುದೇ ಚಟುವಟಿಕೆ ನಡೆಯದಂತೆ ತಡೆ ಒಡ್ಡಿದರು. ಈ ಕಾರಣ ಅಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಪರಿಸ್ಥಿತಿ ಕೈಮೀರುವುದಕ್ಕೂ ಮುಂಚೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪ್ರತಿಭಟನೆಕಾರರು ಕ್ಷಮಾಪಣೆ ಬರೆದುಕೊಡುವಂತೆ ಮೆಟ್ರೊ ಸಿಬ್ಬಂದಿಯನ್ನು ಆಗ್ರಹಿಸಿದರು. ಸಂವಿಧಾನದಲ್ಲಿನ ನಿಯಮಗಳನ್ನು ಪಾಲಿಸಲಾಗಿದೆ. ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯ ಅವಮಾನ ಮಾಡಿಲ್ಲ ಎಂದು ಮೆಟ್ರೊ ಅಧಿಕಾರಿಗಳು ಬರೆದು ಕೊಟ್ಟ ನಂತರ ಪರಿಸ್ಥಿತಿ ಶಾಂತವಾಯಿತು.
(ದಟ್ಸ್ಕನ್ನಡ ವಾರ್ತೆ)
Comments
Story first published: Monday, September 24, 2007, 12:58 [IST]