ಡಿಎಂಕೆ ಕಾರ್ಯಕರ್ತರಿಂದ ಬಿಜೆಪಿ ವಿಎಚ್ಪಿ ಕಚೇರಿ ಮೇಲೆ ದಾಳಿ
ಚೆನ್ನೈ, ಸೆ.23 : ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮೇಲೆ ಬಿಜೆಪಿ ಫತ್ವಾ ಹೊರಡಿಸಿದ್ದರಿಂದ ರೊಚ್ಚಿಗೆದ್ದಿರುವ ಡಿಎಂಕೆ ಕಾರ್ಯಕರ್ತರು ಭಾನುವಾರ ಇಲ್ಲಿನ ಬಿಜೆಪಿ, ಹಿಂದೂ ಮುನ್ನಾನಿ ಮತ್ತು ವಿಎಚ್ಪಿ ಕಚೇರಿ ಮೇಲೆ ದಾಳಿ ಮಾಡಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.
ವಿಎಚ್ಪಿ ನಾಯಕ ಮತ್ತು ಬಿಜೆಪಿಯ ಮಾಜಿ ಸಂಸತ್ ಸದಸ್ಯ ರಾಮ ವಿಲಾಸ್ ವೇದಾಂತಿ ನೀಡಿರುವ ಫತ್ವಾವನ್ನು ಹಿಂಪಡೆಯಬೇಕೆಂದು ಡಿಎಂಕೆ ಒತ್ತಾಯಿಸಿದೆ.
ವೈದ್ಯರಾಮನ್ ಬೀದಿಯಲ್ಲಿರುವ ಬಿಜೆಪಿ ಮುಖ್ಯ ಕಾರ್ಯಾಲಯ ಕಮಲಾಲಯಂ ಮೇಲೆ ಅನಬಳಗ ನೇತೃತ್ವದಲ್ಲಿ ಸುಮಾರು 500 ಡಿಎಂಕೆ ಕಾರ್ಯಕರ್ತರು ದಾಳಿ ನಡೆಸಿದ್ಹಾರೆ. ನಂತರ ಎಗ್ಮೋರ್ನಲ್ಲಿರುವ ಹಿಂದೂ ಮುನ್ನಾನಿ ಕಚೇರಿಯ ಮೇಲೂ ದಾಳಿ ನಡೆದಿದೆ. ಟಿ ನಗರದಲ್ಲಿರುವ ವಿಎಚ್ಪಿ ಕಚೇರಿ ಮೇಲೂ ಕಲ್ಲು ತೂರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ನಾಯಕ ಎಚ್.ರಾಜಾ ಅವರ ಮನೆಯ ಮೇಲೂ ಇಂದು ಬೆಳಗಿನ ಜಾವದಲ್ಲಿ ಡಿಎಂಕೆ ಕಾರ್ಯಕರ್ತರು ಆಕ್ರಮಣ ನಡೆಸಿದ್ದಾರೆ.
ರಾಜ್ಯಾದ್ಯಂತ ನಡೆದಿರುವ ಪ್ರತಿಭಟನೆಯಲ್ಲಿ ರಾಮ್ ವಿಲಾಸ್ ವೇದಾಂತಿ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿದ್ದಾರೆ. ದಂಗೆ ಹಾಕುತ್ತಿದ್ದ ಕಾರ್ಯಕರ್ತರನ್ನು ಚದುರಿಸಲು ಕೆಲ ಸ್ಥಳಗಳಲ್ಲಿ ಪೊಲೀಸರು ಲಾಠಿ ಪ್ರಹಾರವನ್ನೂ ಮಾಡಬೇಕಾಯಿತು.
(ಯುಎನ್ಐ)
ಪೂರಕ
ಓದಿಗೆ-
ತಲೆ
ತೆಗೆದರೂ
ಗೌರವ
ಅಳಿಸಲಾದೀತೆ
:
ಕರುಣಾ
ಗುಡುಗು