ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಗುಲ್ಲಾ ಬಾಯಿಗೆ ಹಿತ ಕಣ್ಣಿಗೆ

By Staff
|
Google Oneindia Kannada News

ರಸಗುಲ್ಲಾ ಎಂದರೆ ಬಾಯಲ್ಲಿ ನೀರಷ್ಟೇ ಅಲ್ಲ ಇನ್ನು ಮೇಲೆ ಕಣ್ಣು ಕೂಡ ಅರಳುತ್ತದೆ. ಕಣ್ಣಿಗೂ ಕಣ್ಣಿನ ಗುಡ್ಡೆಯಂತೆ ಕಾಣುವ ರಸಗುಲ್ಲಾಕ್ಕೂ ಎತ್ತಣಿದೆತ್ತರ ಸಂಬಂಧ ಎಂದು ನೀವು ಹುಬ್ಬುಹಾರಿಸಬಹುದು.

ಕೋಲ್ಕೊತಾ ಜೋಧಪುರ ವಿಶ್ವವಿದ್ಯಾಲಯದ ಆಹಾರ ತಂತ್ರಜ್ಞಾನ ವಿಭಾಗ ವಿಟಾಮಿನ್ ಎ ಜಾಸ್ತಿಯಿರುವ ಗಜ್ಜರಿಯಿಂದ ಹರ್ಬಲ್ ರಸಗುಲ್ಲಾವನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ.

ಈ ಹರ್ಬಲ್ ರಸಗುಲ್ಲಾ ಕಣ್ಣಿಗೆ ಉತ್ತಮ ಮಾತ್ರವಲ್ಲ ಇದರಲ್ಲಿ ಆಂಟಿ ಆಕ್ಸಿಡಂಟ್ ಇರುವುದರಿಂದ ಕ್ಯಾನ್ಸರ್, ಪೋಷಕಾಂಶ ಕೊರತೆ, ಪುಪ್ಪುಸ ರೋಗಗಳನ್ನೂ ಗುಣಪಡಿಸಲಿದೆ ಮತ್ತು ವಯಸ್ಸಿನ ಓಟವನ್ನು ತಗ್ಗಿಸಲಿದೆ ಎಂದು ಫುಡ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಉತ್ಪಲ್ ರಾಯ್‌ಚೌಧರಿ ಹೇಳಿದ್ದಾರೆ.

***

ಇನ್ನೆರಡು ದಿನ ಮಳೆ ದರ್ಬಾರು; ಕೈಯಲ್ಲಿ ಛತ್ರಿ ಇರಲಿ

ರಾಜ್ಯದಲ್ಲಿ ಮುಂದಿನ 48ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಂಗಳವಾರವೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮೋಡ ಕವಿದ ವಾತಾವರಣ ಮುಂದುವರೆದಿದೆ.

ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಕಡೆ ಮತ್ತು ಬೆಂಗಳೂರಿನಲ್ಲೂ ಮಳೆ ಸುರಿಯುವ ಸಾಧ್ಯತೆಗಳಿವೆ. ಚಿತ್ರದುರ್ಗ, ಕೋಲಾರ, ಶಿವಮೊಗ್ಗ, ಕೊಡಗು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ ಕಳೆದ ಏಳೆಂಟು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ.

***

ಯಾರದೋ ತಪ್ಪಿಗೆ ಪುಟ್ಟೇನಹಳ್ಳಿ ವಾಸಿಗಳಿಗೆ ಗಂಭೀರ ಶಿಕ್ಷೆ!

ನಗರದ ಪುಟ್ಟೇನಹಳ್ಳಿ ವಾಸಿಗಳ ಪಾಡು ಹೇಳತೀರದು. ಈ ಮಧ್ಯೆ ಅವರ ಬದುಕು ಸೋಮವಾರ(ಸೆ.17)ಬೀದಿಗೆ ಬಿದ್ದಿದೆ. ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅಂದರೆ ಇದೇನಾ?

ಪುಟ್ಟೇನಹಳ್ಳಿಯ ರಾಜಕಾಲುವೆಯನ್ನು ಒತ್ತುವರಿ ಮಾಡಿ ಕೆಲವು ಕಿಡಿಗೇಡಿಗಳು ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದರು. ಗುರುವಾರ ರಾತ್ರಿ (ಸೆ.13) ಸುರಿದ ಮಳೆಗೆ ಅಲ್ಲಿನ ಮನೆಗಳಿಗೆ ನೀರು ನುಗ್ಗಿ ಅವರ ಪಾಡು ನಾಯಿಪಾಡಾಗಿತ್ತು. ಈಗ ಏಕಾಏಕಿ ಪಾಲಿಕೆ ಒತ್ತುವರಿ ತೆರವು ಮಾಡಿಸಿ ಮನೆಗಳನ್ನು ಕೇಡವಿಹಾಕಿದೆ.

ಬಾಡಿಗೆದಾರರಿಗೆ ಈಗ ಮನೆಯೂ ಇಲ್ಲ ಮನೆ ಮಾಲೀಕನಿಗೆ ಕೊಟ್ಟ ಮುಂಗಡವೂ ಇಲ್ಲದಂತಾಗಿದೆ. ಈಗ ಇವರು ಅಪಾರ್ಟ್‌ಮೆಂಟ್‌ಗಳ ಪಾರ್ಕಿಂಗ್ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ವೃದ್ಧರು, ಮಕ್ಕಳು, ಮಹಿಳೆಯರ ಪಾಡು ಹೇಳತೀರದು.

***

ಉಗ್ರರ ಕಣ್ಣು ಗುಡಿ ಮೇಲೆ

ಮಹಾರಾಷ್ಟ್ರದಲ್ಲಿನ ಅಹ್ಮದ್‌ನಗರ, ನಾಸಿಕ್ ಜಿಲ್ಲೆಗಳಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಶಿರಡಿ, ತ್ರಯಂಬಕೇಶ್ವರ ಆಲಯಗಳ ಮೇಲೆ ಉಗ್ರರು ದಾಳಿ ಮಾಡುವ ಅವಕಾಶಗಳಿವೆಯೆಂದು ಕೇಂದ್ರ ಗುಪ್ತದಳ ಎಚ್ಚರಿಸಿದೆ.

ಉಗ್ರವಾದಿಗಳ ಹಿಟ್‌ಲಿಸ್ಟ್‌ನಲ್ಲಿರುವ ಈ ಎರಡು ಆಲಯಗಳ ಮೇಲೆ ನವರಾತ್ರಿ, ದೀಪಾವಳಿ ಹಬ್ಬಗಳ ಸಂದರ್ಭಗಳಲ್ಲಿ ದಾಳಿ ನಡೆಯಬಹುದೆಂದು ನಾಸಿಕ್ ರೇಂಜ್‌ನ ಸ್ಪೆಶಲ್ ಇನ್ಸ್‌ಪೆಕ್ಟರ್ ಜನರಲ್ ಪಿ.ಕೆ ಜೈನ್ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X