ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರಿ ಮಳೆಯ ನಿರೀಕ್ಷೆ ,ರಾಜ್ಯದ ಕರಾವಳಿಯಲ್ಲಿ ಕಟ್ಟೆಚ್ಚರ

By Staff
|
Google Oneindia Kannada News

ಬೆಂಗಳೂರು, ಸೆ 16: ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಮುಂಬರುವ ಎರಡು ದಿನ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳವಾರದವರೆಗೂ ಹವಾಮಾನ ಮುನ್ಸೂಚನೆ ಹೀಗಿದೆ:

ರಾಜ್ಯದ ಹಲವೆಡೆ ಗುಡುಗು ಹಾಗೂ ಮಿಂಚು ಸಹಿತ ಭಾರಿ ಮಳೆ ಸಾಧ್ಯತೆ.

ಭಾರಿ ಮಳೆ ಬೀಳುವ ಸಾಧ್ಯತೆಯಿರುವುದರಿಂದ ರೈತರಿಗೆ ಹಾಗೂ ಕರಾವಳಿ ತೀರದವರಿಗೆ ಎಚ್ಚರದಿಂದಿರಲು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಎಂದಿನಂತೆ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಸಂಜೆ ವೇಳೆ ಮಳೆ ಬೀಳುವ ಸಾಧ್ಯತೆಗಳಿವೆ.

ಶನಿವಾರ ರಾಜ್ಯದ ಮಡಿಕೇರಿಯಲ್ಲಿ 5; ಶಿರಾಳಿಯಲ್ಲಿ 4; ಮಂಗಳೂರಿನಲ್ಲಿ 3 ; ಚಿಕ್ಕಮಗಳೂರು, ಮೈಸೂರು, ಹೊನ್ನಾವರ, ಕಾರ್ಕಳ, ಕಾರವಾರಗಳಲ್ಲಿ ತಲಾ 2; ಧಾರವಾಡ, ರಾಯಚೂರು, ಚಿತ್ರದುರ್ಗಗಳಲ್ಲಿ ತಲಾ 1 ಸೆಂ.ಮೀ ಮಳೆ ಬಿದ್ದಿರುವ ವರದಿಯಾಗಿದೆ.

(ಯುಎನ್ ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X