ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಪಾಯದಿಂದ ಪಾರು
ಕಾರು ಮತ್ತು ಲಾರಿ ಅಪಘಾತದಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿಗೆ ಸಿರಿಗೆರೆಯಿಂದ ಕಾರಿನಲ್ಲಿ ಶ್ರೀಗಳು ಪ್ರಯಾಣ ಮಾಡುತ್ತಿದ್ದರು. ಹಿರಿಯೂರು ಬಳಿ ಅಡ್ಡ ಬಂದ ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪಕ್ಕಕ್ಕೆ ತಿರುಗಿಸಿದಾಗ ಕಾರು, ಲಾರಿಯೊಂದಕ್ಕೆ ಡಿಕ್ಕಿ ಹೊಡೆಯಿತು.
ಕಾರು ತಲೆಕೆಳಗಾಗಿ ಬಿದ್ದರೂ, ಶ್ರೀಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
***
ಕೆರೆ ಸೇರಿದ ವಿಮಾನ
ಬೆಂಗಳೂರಿನ ಪದ್ಮನಾಭ ನಗರದ ಗೌಡನಪಾಳ್ಯದ ಕೆರೆಗೆ ಶನಿವಾರ ವಿಮಾನವೊಂದು ಬಿದ್ದ ಕಾರಣ, ನಾಲ್ವರು ಸಾವನ್ನಪ್ಪಿದ್ದಾರೆ.
ತಾಂತ್ರಿಕ ದೋಷದಿಂದ ದುರಂತ ಸಂಭವಿಸಿದೆ. ಕೇರಳದ ಚಿನ್ನಾಭರಣ ಅಂಗಡಿಗಳ ಸಂಸ್ಥೆ ಅಲೂಕಸ್ ಗೆ ಸೇರಿದ ಈ ಲಘುವಿಮಾನ, ಆಕಾಶಕ್ಕೆ ಜಿಗಿದ ಕೆಲವೇ ಕ್ಷಣಗಳಲ್ಲಿ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು, ಕೆಳಕ್ಕೆ ಬಿತ್ತು. ಇದು ಇಟಲಿ ನಿರ್ಮಿತ ವೊಕನೇಕರ್ ವಿಮಾನ ಎಂದು ಗುರ್ತಿಸಲಾಗಿದೆ.
Comments
Story first published: Sunday, September 9, 2007, 17:20 [IST]