ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಡುಕನಿಗೆ ತಮಾಷೆ; ಎಂಇಎಸ್ ಕಾಲೇಜಿನಲ್ಲಿ ಆತಂಕ!
ಬೆಂಗಳೂರು, ಸೆಪ್ಟೆಂಬರ್ 08 : ಹುಸಿ ಬಾಂಬ್ ಹಾವಳಿ ನಗರದಲ್ಲಿ ಇತ್ತೀಚೆಗೆ ಹೆಚ್ಚುತ್ತಿದೆ. ಕುಡುಕ ಭದ್ರತಾ ಸಿಬ್ಬಂದಿಯೊಬ್ಬರಿಂದಾಗಿ ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಬೈಕಲ್ಲಿ ಬಂದ ಇಬ್ಬರು ವ್ಯಕ್ತಿಗಳು ನನ್ನ ಥಳಿಸಿದರು. ಕಾಲೇಜಲ್ಲಿ ಬಾಂಬಿಟ್ಟಿದ್ದೇವೆ, ಇನ್ನು ಒಂದು ಗಂಟೆಯೊಳಗೆ ಅದು ಸ್ಫೋಟಿಸುತ್ತದೆ ಎಂಬ ಸೂಚನೆ ನೀಡಿದರು ಎಂದು ಭದ್ರತಾ ಸಿಬ್ಬಂದಿ ದೇವರಾಜ(26)ಹೇಳಿದ್ದೇ ತಡ, ಬಾಂಬ್ ನಿಗ್ರಹ ಪಡೆ ಮತ್ತು ಪೊಲೀಸರು ಓಡಿ ಬಂದರು. ಎಲ್ಲೆಡೆ ಹುಡುಕಿದ್ದೇ ಹುಡುಕಿದ್ದು, ಕೊನೆಗೆ ಇದೊಂದು ಹುಸಿ ಸಂಗತಿ ಎಂಬುದು ಬಯಲಾಯಿತು.
ಭಯದಿಂದ ಕಾಲೇಜಿನಿಂದ ಹೊರಬಂದಿದ್ದ ವಿದ್ಯಾರ್ಥಿಗಳು ಶುಕ್ರವಾರ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಸುಳ್ಳು ಹೇಳಿದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, September 8, 2007, 14:12 [IST]