ಚಿಕ್ಕಮಗಳೂರು :ಅಗೋ ನಕ್ಸಲರು, ಇಗೋ ನಕ್ಸಲರು!
ಚಿಕ್ಕಮಗಳೂರು, ಸೆಪ್ಟೆಂಬರ್ 06 : ಜಿಲ್ಲೆಯಲ್ಲೀಗ ಅಗೋ ನಕ್ಸಲರು, ಇಗೋ ನಕ್ಸಲರು ಎನ್ನುವಂತಾಗಿದೆ. ನಿನ್ನೆ ಅಲ್ಲಿದ್ದರಂತೆ, ಮೊನ್ನೆ ಅವರ ಮನೆಗೆ ಬಂದಿದ್ದರಂತೆ ಎಂಬ ಮಾತುಗಳೀಗ ಇಲ್ಲಿ ಸರ್ವೇ ಸಾಮಾನ್ಯ.
ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪದ ಗೋಣಿ ಬೀಡು ಗ್ರಾಮದಲ್ಲಿ ಐವರು ನಕ್ಸಲೀಯರು, ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿರುವುದು ಗುರುವಾರ ವರದಿಯಾಗಿದೆ.
ಮೂವರು ಮಹಿಳೆಯರು ಸೇರಿದಂತೆ ಐವರು ನಕ್ಸಲೀಯರು, ಮಾರಪ್ಪ ಎನ್ನುವ ಸ್ಥಳೀಯ ವ್ಯಕ್ತಿಯೊಬ್ಬರ ಮನೆಯಲ್ಲಿ ಇದ್ದಾರೆ ಎಂಬ ಸುಳಿವಿನನ್ವಯ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಪ್ರಯತ್ನ ಫಲಕಾರಿಯಾಗಲಿಲ್ಲ. ನಕ್ಸಲರು ಕತ್ತಲಲ್ಲಿ ಕಣ್ಮರೆಯಾದರು ಎಂದು ನಕ್ಸಲ್ ನಿಗ್ರಹ ಪಡೆ ಹೇಳಿದೆ.
ಒಟ್ಟಿನಲ್ಲಿ ಈ ಭಾಗದಲ್ಲಿ ನಕ್ಸಲರು ಮತ್ತು ಪೊಲೀಸರ ನಡುವೆ ಕಣ್ಣಾಮುಚ್ಚಾಲೆ ಆಟ ನಿರಂತರವಾಗಿ ನಡೆದಿದೆ.
ನಕ್ಸಲರ
ರಕ್ತದಾಹ
:
ದೇಶದಲ್ಲಿ
ಕಳೆದ
3ವರ್ಷಗಳಲ್ಲಿ
129ಜನಪ್ರತಿನಿಧಿಗಳು
ನಕ್ಸಲೀಯರಿಗೆ
ಬಲಿಯಾಗಿದ್ದಾರೆ
ಎಂಬ
ಸಂಗತಿಯನ್ನು
ವರದಿಯೊಂದು
ಖಚಿತಪಡಿಸಿದೆ.
(ದಟ್ಸ್ ಕನ್ನಡ ವಾರ್ತೆ)