ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ದುಲ್ ಕಲಾಂ ಕರ್ನಾಟಕದ ಹುಡುಗರಿಗೆ ಪಾಠ ಮಾಡ್ತಾರೆ!

By Staff
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06 : ಪ್ರಸ್ತುತ ಅಧ್ಯಾಪಕರಾದ ಎ.ಪಿ.ಜೆ. ಅಬ್ದುಲ್ ಕಲಾಂ (ಮಾಜಿ ರಾಷ್ಟ್ರಪತಿ ಎಂದು ಕರೆಯಬೇಡಿ ಎಂದಿದ್ದರಿಂದ), ಜೆ‍ಎಸ್‌ಎಸ್ ಶಿಕ್ಷಣ ಸಂಸ್ಥೆಗೆ ಗೌರವ ಪ್ರಾಧ್ಯಾಪಕರಾಗಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.

ಜೆ‌ಎಸ್‌ಎಸ್ ಮಹಾ ವಿದ್ಯಾಪೀಠಕ್ಕೆ ಸೇರಿದ ಕಾಲೇಜುಗಳಲ್ಲಿ ವರ್ಷಕ್ಕೆ 5 ರಿಂದ 6 ಉಪನ್ಯಾಸಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಹಾಗೆಯೆ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸುವರು. ಮೈಸೂರಿನ ಜೆ‍ಎಸ್‌ಎಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕಲಾಂ ಅವರ ಪ್ರಥಮ ಉಪನ್ಯಾಸ ಇರುತ್ತದೆ ಎಂದು ಸಂಸ್ಥೆ ತಿಳಿಸಿದೆ. ಕಲಾಂ ಅವರು ಈ ನಿರ್ಧಾರ ತೆಗೆದುಕೊಂಡಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಉಂಟುಮಾಡಿದೆ.

ನಿವೃತ್ತರಾದರೆ ಸಾಕಪ್ಪಾ ಎಂದು ಹಂಬಲಿಸುವ ಈ ಯುಗದಲ್ಲಿ ಇಳಿವಯಸ್ಸಿನಲ್ಲೂ ಅವರ ಬತ್ತದ ಉತ್ಸಾಹ, ದೇಶದ ಬಗೆಗಿನ ಹೆಮ್ಮೆ, ಪಾಠ ಮಾಡಬೇಕೆಂಬ ಹುಮ್ಮಸ್ಸಿಗೆ ನಾವು ಸಲಾಂ ಹೇಳಲೇಬೇಕು. ನಮ್ಮ ಕರ್ನಾಟಕದ ಶಿಕ್ಷಣ ಸಂಸ್ಥೆಗೆ ಅಧ್ಯಾಪಕರಾಗಿ ಬಂದಿರುವುದನ್ನು ನಾವು ಸ್ವಾಗತಿಸೋಣ. ಇವರ ಅನುಕರಣೀಯ ಶೈಲಿ ಎಲ್ಲ ಅಧ್ಯಾಪಕರಿಗೂ ಸ್ಪೂರ್ತಿಯಾಗಲಿ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X