For Daily Alerts
ಶಿಕ್ಷಕರ ದಿನಾಚರಣೆಯ ದಿವಸ ಹೆಡ್ ಮಾಸ್ಟರಾದ ಚಟರ್ಜಿ!
ನವದೆಹಲಿ, ಸೆಪ್ಟಂಬರ್ 05 : ಈಗೀಗ ಗುರುಗಳ ಬಗ್ಗೆ ನಯ, ಭಯ, ವಿನಯ, ಭಕ್ತಿ ಇಲ್ಲದಿರುವುದನ್ನು ಕಂಡು ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿಯರು ಬೇಸರಿಸಿಕೊಂಡಿದ್ದಾರೆ.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಲೋಕಸಭೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಎಸ್.ಸರ್ವಪಲ್ಲಿ ರಾಧಾಕೃಷ್ಣನ್ರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ಎಂದರೆ ಹೆಡ್ಮಾಸ್ಟರ್ ಇದ್ದಂಗೆ. ಅದಕ್ಕೆ ಅವರು ಇವತ್ತಾದರೂ ಹೆಡ್ಮಾಸ್ತರ್ ರ ಮಾತು ಕೇಳಿ ಎಂದು ಸಂಸದ ವಿದ್ಯಾರ್ಥಿಗಳನ್ನು ಚಟರ್ಜಿ ಕೇಳಿಕೊಂಡರು. ದುರಂತ ಅಂದರೆ ಸಂಸದರು ಇವರ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದೆ ಯಥಾ ಪ್ರಕಾರ ಕೆಸರೆರೆಚಾಟದಲ್ಲಿ ನಿರತರಾಗಿದ್ದರು.
(ದಟ್ಸ್ಕನ್ನಡ ವಾರ್ತೆ)
Comments
Story first published: Wednesday, September 5, 2007, 5:30 [IST]