ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಬಾಬುಡನ್ ಗಿರಿಯತ್ತ ಹೊರಟಿದ್ದ ಬಸ್ ಉರುಳಿ 6ಬಲಿ!
ಚಿಕ್ಕಮಗಳೂರು , ಸೆಪ್ಟೆಂಬರ್ 05 : ಖಾಸಗಿ ಬಸ್ಸೊಂದು ಬುಧವಾರ ಮಧ್ಯಾಹ್ನ ಕಂದರಕ್ಕೆ ಉರುಳಿ, 6ಮಂದಿ ಸಾವನ್ನಪ್ಪಿದ್ದು 20ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಚಿಕ್ಕಮಗಳೂರು ಮತ್ತು ಬಾಬಾಬುಡನ್ ಗಿರಿ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ನತದೃಷ್ಟ ಬಸ್, ಚಿಕ್ಕಮಗಳೂರಿನಿಂದ ಬಾಬಾ ಬುಡನ್ ಗಿರಿಗೆ ಹೋಗುತ್ತಿತ್ತು. ರಸ್ತೆ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ಕಂದರಕ್ಕೆ ಉರುಳಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಗಾಯಗೊಂಡ ಪ್ರಯಾಣಿಕರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
(ಯುಎನ್ಐ)
Comments
Story first published: Wednesday, September 5, 2007, 5:30 [IST]