ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತೆ ಮಹಾದೇವಿಯವರೇ, ಬಾಲಕಿ ಯಾಕೆ ಸತ್ತಳು ಹೇಳಿ?

By Staff
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 04 : ಕಚೇರಿಯಲ್ಲಿ, ಶಾಲೆಯಲ್ಲಿ, ರಸ್ತೆಯಲ್ಲಿ ಇದ್ದದ್ದೇ ಬಿಡಿ. ಆದರೆ ಆಶ್ರಮದಲ್ಲೂ ಲೈಂಗಿಕ ಕಿರುಕುಳವೇ? ಈ ಪ್ರಶ್ನೆಗೆ ಕಾರಣ; ಆಶ್ರಮದ ಬಾಲಕಿಯೊಬ್ಬಳ ಆತ್ಮಹತ್ಯೆ!

ಕುಂಬಳಗೋಡು ಬಳಿಯ ಮಾತೆ ಮಹಾದೇವಿ ಅವರ ಬಸವ ಗಂಗೋತ್ರಿ ಅನಾಥಾಲಯದ ಆಶ್ರಮದಲ್ಲಿ ಈ ದುರಂತ ನಡೆದಿದೆ. ಈ ಘಟನೆ ಖಂಡಿಸಿ ನಾಗರಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಆಶ್ರಮಕ್ಕೆ ಕಲ್ಲು ತೂರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಹತ್ತನೇ ತರಗತಿ ವಿದ್ಯಾರ್ಥಿನಿ ಆಶಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಚಿಕ್ಕಮಗಳೂರು ಜಿಲ್ಲೆಯ ಆಶಾ, ಈ ಆಶ್ರಮದಲ್ಲಿ ವಾಸವಾಗಿದ್ದಳು. ಓದಿನಲ್ಲಿ ಬಹು ಜಾಣೆ.

ಆಶ್ರಮದಲ್ಲಿನ ಲೈಂಗಿಕ ಕಿರುಕುಳ ತಡೆಯಲಾರದೇ, ನನ್ನ ಮಗಳು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ ಎನ್ನುವುದು ಆಶಾ ತಾಯಿಯ ಆರೋಪ.
ಇಲ್ಲಿ ನನಗೆ ಲೈಂಗಿಕ ಕಾಟ ಕೊಡುತ್ತಿದ್ದಾರೆ. ಮನೆಗೆ ವಾಪಸ್ ಬರುತ್ತೇನೆ ಎಂದು ಆಶಾ ಪದೇಪದೇ ಹೇಳುತ್ತಿದ್ದಳು. ನಮ್ಮ ಮಗಳ ಸಾವಿಗೆ ಮಾತೆ ಮಹಾದೇವಿ ಮತ್ತು ಆಶ್ರಮದ ಮೇಲ್ವಿಚಾರಕರೇ ನೇರ ಹೊಣೆ ಎನ್ನುತ್ತಾರೆ ಪೋಷಕರು.

ಈ ಆರೋಪವನ್ನು ತಳ್ಳಿ ಹಾಕುವ ಆಶ್ರಮದ ಸಿಬ್ಬಂದಿ, ಆಶಾ ನಡತೆ ಚೆನ್ನಾಗಿರಲಿಲ್ಲ. ಇತ್ತೀಚೆಗೆ ಹೊಟ್ಟೆ ನೋವಿನಿಂದ ನರಳುತ್ತಿದ್ದಳು ಎನ್ನುತ್ತಾರೆ. ಸತ್ಯ ಪೊಲೀಸರ ತನಿಖೆಯಿಂದ ಹೊರಬೀಳಬೇಕಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X