ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಲ ಕೆಟ್ಟೋಯ್ತು ಕಾಗೆ ರಾಗಿ ತಿಂತು, ಬೇವಿನಿಂದ ಹಾಲು ಬಂತು!
ಗುಲ್ಬರ್ಗ, ಸೆಪ್ಟೆಂಬರ್ 4: ಇದು ಕಲಿಯುಗ ಮಹಾತ್ಮೆ ಎನ್ನಿ ಇಲ್ಲಾ ಕಾಲಕೆಟ್ಟು ಕಾಗೆ ರಾಗಿ ತಿಂತು ಎನ್ನಿ. ಗುಲ್ಬರ್ಗದ ಹನುಮಾನ್ ಮಂದಿರದ ಬಳಿ ಇರುವ ಬೇವಿನ ಗಿಡದ ಕೊಂಬೆಯೊಂದರಿಂದ ಹಾಲು ಜಿನುಗುತ್ತಿದೆ.
ಎಸ್.ಎಲ್.ಭೈರಪ್ಪನವರ ‘ನಾಯಿ ನೆರಳು’ ಕಾದಂಬರಿಯಲ್ಲಿ ಇಂಥಹದ್ದೆ ಒಂದು ಘಟನೆ ಬರುತ್ತದೆ. ಅದರಲ್ಲಿ ಬರುವ ವಿಶ್ವ ಇದನ್ನು ಪರೀಕ್ಷಿಸಲು ಹೋಗಿ ಊರ ದೇವರ ಕೋಪಕ್ಕೆ ಕಾರಣನಾಗುತ್ತಾನೆ.
ಆದರೆ ಇಲ್ಲಿ ಯಾರೂ ಪರೀಕ್ಷಿಸಲು ಹೋಗಿಲ್ಲ. ನಮ್ಮ ಜನ ಗೊತ್ತಲ್ಲ ಈ ರೀತಿಯ ‘ಅದ್ಭುತ’ ಸಂಭವಿಸುವುದನ್ನೇ ಕಾಯುತ್ತಿರುತ್ತಾರೆ. ಇಲ್ಲೂ ಅಷ್ಟೆ ಮರಕ್ಕೆ ಪೂಜೆ, ಪುನಸ್ಕಾರ ಶುರುವಾಗಿದೆ. ಕೆಲವು ಗಿಡಗಳಲ್ಲಿ ಈ ರೀತಿ ಹಾಲು ವಸರುವುದು ಸಹಜ ಎನ್ನುತ್ತಾರೆ ಸಸ್ಯವಿಜ್ಞಾನಿಗಳು.
(ದಟ್ಸ್ಕನ್ನಡ ವಾರ್ತೆ)
Comments
Story first published: Tuesday, September 4, 2007, 5:30 [IST]