ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪರಿಹಾರ ಬರೆದು ಸೂಚಿಸುವ ಚೌಡೇಶ್ವರಿ ಸನ್ನಿಧಿಯಲ್ಲಿ ಹಬ್ಬ!
ತುಮಕೂರು, ಆಗಸ್ಟ್ 31 : ದಸರೀಘಟ್ಟದ ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ರಾಜಗೋಪುರ ಕುಂಭಾಭಿಷೇಕ ಉತ್ಸವವನ್ನು ಆದಿಚುಂಚನ ಗಿರಿ ಮಠದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಉದ್ಘಾಟಿಸಿದರು.
ಮೂರು ದಿನಗಳ ಕಾಲ ನಡೆಯುವ ಉತ್ಸವವು ಶನಿವಾರ ಮುಕ್ತಾಯವಾಗಲಿದೆ. ರಾಜ್ಯದ ನಾನಾ ಕಡೆಯಿಂದ ಬಂದ ಒಂದು ಲಕ್ಷಕ್ಕೂ ಅಧಿಕ ಭಕ್ತಾದಿಗಳು, ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಇಲ್ಲಿನ ದೇವಿ ಚೌಡೇಶ್ವರಿ, ನಂಬಿದವರ ಕಷ್ಟ ನಿವಾರಿಸುವಳೆಂಬ ನಂಬಿಕೆ ಜನರಲ್ಲಿದೆ. ಭಕ್ತರ ಸಮಸ್ಯೆ ಅಥವಾ ಸಂಕಟ ಏನೇ ಇರಲಿ ಅದನ್ನು ಅರಿತು, ಅಕ್ಕಿಯ ಮೇಲೆ ದೇವಿ(ಮೆರವಣಿಗೆ ವಿಗ್ರಹ) ಪರಿಹಾರವನ್ನು ಬರೆಯುತ್ತಾಳೆ ಎಂಬುದು ಕ್ಷೇತ್ರದ ಜನರ ಮಾತು.
1.25ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನವನ್ನು 1996ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, August 31, 2007, 5:30 [IST]