ಕಾಗಿನೆಲೆ ಅಭಿವೃದ್ಧಿಗೆ 50 ಕೋಟಿ ರು. ವ್ಯಯಿಸಲು ನಿರ್ಧಾರ
ಬೆಂಗಳೂರು, ಆಗಸ್ಟ್ 31 : ಉಡುಪಿ ಕೃಷ್ಣನ ಕೃಪೆಗೆ ಪಾತ್ರನಾದ ಭಕ್ತ ಕನಕದಾಸ ಆಡಿ ಬೆಳೆದ ಕಾಗಿನೆಲೆ ಅಭಿವೃದ್ಧಿಗೆ ಮುಂದಿನ ದಶಕದಲ್ಲಿ 50 ಕೋಟಿ ವ್ಯಯಿಸಲು ನಿರ್ಧರಿಸಿದೆ.
ಕಾಗಿನೆಲೆ ಮಾತ್ರವಲ್ಲದೆ ಐತಿಹಾಸಿಕ ಸ್ಥಳದ ಸುತ್ತಲಿನ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಲಾಗುವುದು ಎಂದು ಕೃಷಿ ಸಚಿವ ಬಂಡೆಪ್ಪ ಕಾಶಂಪುರ್ ಮತ್ತು ನೀರಾವರಿ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಆಗಸ್ಟ್ 24ರಂದು ಮೊದಲಬಾರಿ ಭೇಟಿ ಮಾಡಿ ಕಾಗಿನೆಲೆಗೆ ರಸ್ತೆ ಸಂಪರ್ಕ ಕಲ್ಪಿಸುವ, ಊರಿಗೆ ಮುಖ್ಯದ್ವಾರ ಮತ್ತು ದೇವಸ್ಥಾನ ನಿರ್ಮಿಸುವ ಕುರಿತು ಚರ್ಚಿಸಿತು ಎಂದು ಅವರು ವಿವರಿಸಿದರು.
ಭಕ್ತ ಕನಕದಾಸ ಹುಟ್ಟಿದ ಬಾಡ ಹಳ್ಳಿಯಲ್ಲಿ ಉತ್ಖನನ ಕಾರ್ಯಕ್ಕೆ ಭಾರತೀಯ ಉತ್ಖನನ ಸರ್ವೇಕ್ಷಣ ಕೇಂದ್ರದ ನೆರವನ್ನು ಪಡೆಯಲಾಗುವುದು ಎಂದು ಅವರು ತಿಳಿಸಿದರು.
ಅಭಿವೃದ್ಧಿಗಾಗಿ ಕುಮ್ಮುರು, ಇಂಗಲಗೊಂಡಿ ಮತ್ತು ಕದರಮಂಡಲಗಿ ಹಳ್ಳಿಗಳನ್ನು ಪ್ರಾಧಿಕಾರ ಗುರುತಿಸಿದೆ. ಸರ್ಕಾರ ಈಗಾಗಲೆ 6.53 ಕೋಟಿ ರು.ಯನ್ನು ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಗೊಳಿಸಲು ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
(ಯುಎನ್ಐ)