ಒಂದೇ ವೇದಿಕೆ ಮೇಲೆ ಡಿಕೆಶಿ, ಹೆಚ್ ಡಿಕೆ ಮುಖಾಮುಖಿ!
ಕುರುಕ್ಷೇತ್ರದ ಕಣವೆಂದೇ ಬಣ್ಣಿಸಲಾಗಿದ್ದ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ಪಾಲ್ಗೊಂಡರು.
ನಗರದಲ್ಲಿ 300ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು.ವೇದಿಕೆ ಮೇಲೆ ಶಿವಕುಮಾರ್ ಸಹಾ ಹಾಜರಿದ್ದರು. ವೇದಿಕೆಯಲ್ಲಿ ಚೆಲುವರಾಯಸ್ವಾಮಿ, ಹೆಚ್.ಡಿ.ರೇವಣ್ಣ ಸಹಾ ಇದ್ದರು.
3500ಕ್ಕೂ ಅಧಿಕ ಮಂದಿ ಪೊಲೀಸರ ಸರ್ಪಗಾವಲು ಅಹಿತಕರ ಘಟನೆಗಳ ತಪ್ಪಿಸಲು ಯಶಸ್ವಿಯಾಯಿತು.
***
ಬಟಾಬಯಲಲ್ಲಿ ಹುಟ್ಟುಡುಗೆಯಲ್ಲಿ ಓಡಾಡಿದ ಮಧ್ಯವಯಸ್ಕರು
ಸಂಪ್ರದಾಯಸ್ತ ಕುಟುಂಬಗಳಿರುವ ಟೈಪೆಯ ಹಳ್ಳಿಯೊಂದರಲ್ಲಿ ಮಧ್ಯವಯಸ್ಸಿನ 21 ಜೋಡಿಗಳು ಬಟಾಬಯಲಲ್ಲಿ ಬೆತ್ತಲೆ ಓಡಾಡಿ ದಂಗುಬಡಿಸಿದ್ದಾರೆ.
ದಕ್ಷಿಣ ತೈವಾನ್ನಲ್ಲಿ ಬಾಂಬೂ ಮರಗಳಿಂದ ಸುತ್ತುವರಿದಿದ್ದ ಹಳ್ಳಿ ಸಿಂಗ್ ಚಾಂಗ್ನಲ್ಲಿನ ಖಾಸಗಿ ಹೊಟೇಲನ್ನು ಬಾಡಿಗೆ ಪಡೆದ 40 ವಯಸ್ಸಿಗಿಂತ ಹೆಚ್ಚಿನ ಈ ಜೋಡಿಗಳು ಬೆತ್ತಲೆ ಓಡಾಡಿದರು ಮತ್ತು ಮೌಖಿಕ ರತಿಸುಖದಲ್ಲಿ ತಲ್ಲೀನರಾಗಿದ್ದರು ಎಂದು ನೆರೆಯ ಮಂದಿ ಆರೋಪಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಟೈಟುಂಗ್ ಕೌಂಟಿಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
***
ಟೀಕೆಗಳ ನಡುವೆಯೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ!?
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಇದ್ದ ವಿಘ್ನಗಳು ದೂರವಾಗಿದ್ದು, ಇಂದು(ಆಗಸ್ಟ್ 30) ಸಮಾರಂಭ ನಡೆಯಲಿದೆ. ಆದರೆ ಆಯ್ಕೆ ಸಮಿತಿಯ ವಿರುದ್ಧ ಟೀಕೆಗಳು ಮುಂದುವರೆದಿವೆ.
ಪ್ರಶಸ್ತಿ ನೀಡಿಕೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ತಳ್ಳಿ ಹಾಕಿದೆ. ಆದರೆ ಆಯ್ಕೆ ಸಮಿತಿ ಮತ್ತು ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿದು ತರಾಟೆಗೆ ತೆಗೆದುಕೊಂಡಿದೆ.
ಅರ್ಜಿದಾರರ ಪರವಾಗಿ ಪ್ರೊ.ರವಿವರ್ಮ ಕುಮಾರ್ ವಾದಿಸಿದರು. ನಿರ್ದೇಶಕ ನಾಗತಿಹಳ್ಳಿ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿ ಪೂರ್ವಗ್ರಹ ಪೀಡಿತವಾಗಿದೆ.ಈ ಆಯ್ಕೆ ಸಮಿತಿಯಲ್ಲಿದ್ದ ಕೆ.ಸಿ.ಎನ್.ಕುಮಾರ್, ಮುಂಗಾರು ಮಳೆ ಚಿತ್ರದ ವಿತರಕರು. ಹೀಗಾಗಿ ಈ ಚಿತ್ರಕ್ಕೆ ಹೆಚ್ಚಿನ ಪ್ರಶಸ್ತಿಗಳು ಸಂದಿವೆ. ಮಕ್ಕಳ ಚಿತ್ರವಿದ್ದರೂ, ಪ್ರಶಸ್ತಿ ನೀಡಿಲ್ಲ ಎಂದು ವಕೀಲ ರವಿಕುಮಾರ್ ದೂರಿದರು.
ವಾದವನ್ನು ಒಪ್ಪಿದ ಹೈಕೋರ್ಟ್, ಲೋಪದೋಷಗಳಾಗಿವೆ. ಅವುಗಳು ಮತ್ತೆ ಪುನರಾವರ್ತನೆಯಾಗದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದೆ.
ಗುರುವಾರ ಸಂಜೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸೇರಿದಂತೆ ವಿವಿಧ ಸಚಿವರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 5.30ಕ್ಕೆ ಗೀತ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ದೂರದರ್ಶನ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಿದೆ.