ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ : ಕೇಳಿದ್ದು ಇನ್ನಷ್ಟು ಅನ್ನ, ಸಿಕ್ಕಿದ್ದು ಬಾಸುಂಡೆ!

By Staff
|
Google Oneindia Kannada News

ಹಾಸನ , ಆಗಸ್ಟ್ 29 : ಶಿಕ್ಷಕರ ಕಿರಿಕಿರಿಗಳು ಇತ್ತೀಚೆಗೆ ಹೆಚ್ಚುತ್ತಿವೆ. ಹಸಿದ ಮಗು ಇನ್ನಷ್ಟು ಅನ್ನ ಕೇಳಿದ್ದಕ್ಕೆ ಜಿಲ್ಲೆಯ ಶಿಕ್ಷಕನೊಬ್ಬ ಮನಬಂದಂತೆ ಥಳಿಸಿದ ಪ್ರಕರಣ ವರದಿಯಾಗಿದೆ.

ಹಾಸನ ಬಳಿಯ ಕೋಡರಾಮನಹಳ್ಳಿ ಸರ್ಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ತುಳಸಿ, ಶಿಕ್ಷಕ ಶಿವಣ್ಣನ ಕೋಪತಾಪಕ್ಕೆ ಸಿಲುಕಿದ ನತದೃಷ್ಟೆ.

ಎಂದಿನಂತೆ ಬಿಸಿಯೂಟದ ಸಾಲಿನಲ್ಲಿ ನಿಂತಿದ್ದ ತುಳಸಿ, ತುಸು ಆಸೆಯಿಂದ ಇನ್ನಷ್ಟು ನೀಡುವಂತೆ ಕೇಳಿದ್ದೇ ತಡ,ಶಿಕ್ಷಕರ ಕೋಪ ಕೆರಳಿತು. ಅವರ ಕೈಯಲ್ಲಿದ್ದ ಕೋಲು, ತುಳಿಸಿ ಮೈಮೇಲೆ ಬಾಸುಂಡೆ ಬರುವ ತನಕ ತನ್ನ ಪ್ರತಾಪ ತೋರಿಸುತ್ತಲೇ ಇತ್ತು.

ಈ ಘಟನೆಯನ್ನು ಪೋಷಕರು ಖಂಡಿಸಿದ್ದು, ಅಮಾನವೀಯವಾಗಿ ಶಿಕ್ಷೆ ನೀಡಿದ ಶಿಕ್ಷಕನಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ತುಳಸಿ ಭಯಗೊಂಡಿದ್ದು, ಜ್ವರದಿಂದ ತತ್ತರಿಸಿ ಮನೆ ಸೇರಿದ್ದಾಳೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X