ಜಂಟಿ ಸಮಿತಿಯಿಂದ ಒತ್ತುವರಿಯಾದ ಜಮೀನಿನ ಪರಿಶೀಲನೆ
ಕರ್ನಾಟಕ ವಿಧಾನ ಮಂಡಲದ ಜಂಟಿ ಸದನ ಸಮಿತಿಯು ಆಗಸ್ಟ್ 28, 2007 ಮಂಗಳವಾರ ಬೆಳಿಗ್ಗೆ 9 ಗಂಟೆಗೆ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106 ರಲ್ಲಿ ಸಭೆ ಸೇರಿ ನಂತರ ಬೆಂಗಳೂರು ನಗರ ಹಾಗೂ ನಗರ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿರುವ ಕೆಲವು ಸ್ಥಳಗಳಿಗೆ ಭೇಟಿ ನೀಡಲಿದೆ.
***
ಆಕಾಶದಲ್ಲಿ ಇಂದು ಎರಡು ಬೆಳದಿಂಗಳು, ಹ್ಹಾಹ್ಹಾಹ್ಹಾ!
ಆಗಸ್ಟ್ 27ರ ರಾತ್ರಿಯಂದು ಮಂಗಳ ಗ್ರಹ ಚಂದ್ರನ ಅತೀ ಹತ್ತಿರ ಬರುತ್ತಿದ್ದು ಅದರಷ್ಟೇ ಗಾತ್ರದಲ್ಲಿ ಕಾಣುತ್ತದೆ ಎಂಬ ಸುದ್ದಿ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಆದರೆ ಅಸಲಿಯತ್ತೇನೆಂದರೆ ಇದೊಂದು ಸುಳ್ಳುಸುದ್ದಿ. ಜೀವಮಾನದಲ್ಲಿ ಮಾತ್ರ ಇಂಥ ಘಟನೆ ಘಟಿಸುತ್ತದೆಂಬ ಸುದ್ದಿ 2003ರಿಂದಲೂ ಸುತ್ತಾಡುತ್ತಿದೆ. 2003ರಿಂದ 2006ರವರೆಗೆ ಇದೇ ಸಮಯದಲ್ಲಿ ಇದೇ ಸುದ್ದಿ ಈ ಮೇಲ್ಗಳಲ್ಲಿ ಸುತ್ತಾಡುತ್ತಿದೆ.
ಜೀವಮಾನದಲ್ಲಿ ಒಂದು ಬಾರಿ ಮಾತ್ರ ಸಂಭವಿಸುವ ಇಂಥ ಘಟನೆ ಪ್ರತಿವರುಷವೂ ಘಟಿಸಲು ಸಾಧ್ಯವೆ? ಗಾತ್ರದಲ್ಲಿ ಚಂದ್ರನಷ್ಟೇ ಮಂಗಳ ಕಾಣಲು ಸಾಧ್ಯವೇ ಇಲ್ಲ.
2003ರಲ್ಲಿ ಒಂದಕ್ಕೊಂದು ಹತ್ತಿರ ಬಂದಿದ್ದೇನೋ ನಿಜ ಆದರೆ 2006ರಲ್ಲಿ ಅವೆರಡೂ ಇನ್ನೂ ದೂರ ಸರಿದಿದ್ದವು.
***
ಮಂಗಳವಾರ ಭಾರತದಲ್ಲಿ ಭಾಗಶಃ ಚಂದ್ರಗ್ರಹಣ
ಆಗಸ್ಟ್ 28ರಂದು ಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಉತ್ತರ ಭಾರತದಲ್ಲಿ ಮತ್ತು ಅಂಮಾನ್ ನಿಕೋಬಾರ್ ದ್ವೀಪಗಳಲ್ಲಿ ಭಾಗಶಃ ಗೋಚರಿಸಲಿದೆ.
ಪೋರ್ಟ್ ಬ್ಲೇರ್, ದಿಬ್ರೂಗಢ್, ಇಂಫಾಲ್, ಕೋಹಿಮಾ, ಇಟಾನಗರ ಮುಂತಾದೆಡೆಗಳಲ್ಲಿ ಗ್ರಹಣ ಕೊನೆಗೊಳ್ಳು ಸಂದರ್ಭದಲ್ಲಿ 16 ನಿಮಿಷಗಳ ಕಾಲ ಗೋಚರಿಸಲಿದೆ.