ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಸವಾದ ಕನ್ನಡ ಧ್ವಜ! : ಹೆಬ್ರಿ ಇಂದು ಪೂರ್ಣ ಬಂದ್
ಕಾರ್ಕಳ, ಆಗಸ್ಟ್ 27 : ಕನ್ನಡ ಬಾವುಟಕ್ಕೆ ಅಪಮಾನವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ, ಸೋಮವಾರ ಹೆಬ್ರಿ ಬಂದ್ ಗೆ ಕರೆ ನೀಡಿದೆ. ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕಳೆದ ವಾರ ತ್ಯಾಜ್ಯ ವಸ್ತುಗಳ ಜೊತೆ ಕನ್ನಡ ಬಾವುಟವೊಂದು ತೆರೆದ ಬಾವಿಯಲ್ಲಿ ಪತ್ತೆಯಾಗಿತ್ತು. ವಿಷಯ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸ್ಥಳೀಯ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಆದರೆ, ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ, ಈ ಕೃತ್ಯಕ್ಕೆ ಕಾರಣರಾದ ಕಿಡಿಗೇಡಿಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಈ ಘಟನೆ ಖಂಡಿಸಿ, ಹೆಬ್ರಿ ಬಂದ್ ನಡೆಸುತ್ತಿರುವುದಾಗಿ ಕರವೇ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಶೆಟ್ಟಿ ಹೇಳಿದ್ದಾರೆ.
ರಕ್ಷಣಾ ವೇದಿಕೆ ಸದಸ್ಯರಾದ ಅಣ್ಣಪ್ಪ ಕುಲಾಲ್, ಕೆರೆಬೆಟ್ಟು ಸಂಜೀವ್ ಶೆಟ್ಟಿ, ಸೀತಾನದಿ ವಿಜೇಂದ್ರ ಶೆಟ್ಟಿ, ಜೆ.ಎಸ್. ರಂಗನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, August 27, 2007, 5:30 [IST]