ಕಿರು ಸುದ್ದಿ: ಜ್ಯೋತಿಷ್ಯ ಕಲಿಯುವ ಆಸೆ ನಿಮ್ಮಲ್ಲಿದೆಯೇ?
ಜ್ಯೋತಿಷ್ಯ ನಿಜವೋ? ಸುಳ್ಳೋ? ನಂಬುವ ಮಂದಿಗೆ ನಿಜ. ನಂಬದವರಿಗೆ ಸುಳ್ಳು! ಈ ಜಿಜ್ಞಾಸೆ ಸದ್ಯಕ್ಕೆ ಈ ಜಾಗದಲ್ಲಿ ಬೇಡ. ಜ್ಯೋತಿಷ್ಯ ಕಲಿಯಲು ಆಸಕ್ತಿ ಇದ್ದವರಿಗೆ ಇಲ್ಲೊಂದು ಅವಕಾಶವಿದೆ.
ಬೆಂಗಳೂರಿನ ಜಯನಗರ 6ನೇ ಬಡವಾಣೆಯಲ್ಲಿರುವ ನೇಸರ ಸೇವಾ ಕೇಂದ್ರ ಜ್ಯೋತಿಷ್ಯ ಮತ್ತು ಇನ್ನಿತರ ಭಾರತೀಯ ಶಾಸ್ತ್ರಗಳನ್ನು ಕಲಿಸಲು ಮುಂದಾಗಿದೆ. ಆಸಕ್ತರು ಸಂಪರ್ಕಿಸಬೇಕಾದ ಬೇಕಾದ ಮೊಬೈಲ್ ಸಂಖ್ಯೆ ; 93412 28585, 98458 47586.
***
ಮೈಸೂರಿನಲ್ಲಿ ಪ್ರಶಸ್ತಿ ಸಂಭ್ರಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಗಸ್ಟ್ 27ರಂದು ಸಂಜೆ 6.30ಕ್ಕೆ ಮೈಸೂರಿನ ಕಲಾಮಂದಿರದಲ್ಲಿ 2006ನೇ ಸಾಲಿನ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಾದ ಶ್ರೀ ಕನಕ ಪುರಂದರ ಪ್ರಶಸ್ತಿ, ದಾನ ಚಿಂತಾಮಣಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಡಾ: ಗುಬ್ಬಿ ವೀರಣ್ಣ ಪ್ರಶಸ್ತಿ, ಶಾಂತಲಾ ನಾಟ್ಯ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ ಹಾಗೂ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗಳನ್ನು ಸದರಿ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅವರು ವಹಿಸಲಿದ್ದಾರೆ.