ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಮಕೂರು: ಗೊರವನಹಳ್ಳಿ ಮಹಾಲಕ್ಷ್ಮಿ ಕ್ಷೇತ್ರದಿ ಗಿಜಿಗಿಜಿ
ತುಮಕೂರು, ಆಗಸ್ಟ್ 25 : ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಶುಕ್ರವಾರ ತುಂಬಿ ತುಳುಕುತ್ತಿತ್ತು. ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ, ಲಕ್ಷ್ಮಿ ಕಟಾಕ್ಷವನ್ನು ಕೋರಿದ್ದಾರೆ.
ನಾಡಿನ ಮೂಲೆಮೂಲೆಗಳಿಂದ ಮಾತ್ರವಲ್ಲದೇ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ದರು. ದಿನವಿಡೀ ದೇವಸ್ಥಾನದಲ್ಲಿ ಹೆಜ್ಜೆಯಿಡಲು ಜಾಗವಿರಲಿಲ್ಲ. ಈ ಸಂದರ್ಭದಲ್ಲಿ ನಡೆದ ರಾಹುಕಾಲ ಪೂಜಾ ಕಾರ್ಯಕ್ರಮದಲ್ಲಿ ಅನೇಕರು ಪಾಲ್ಗೊಂಡಿದ್ದರು.
ಭಕ್ತರು ಲಕ್ಷ್ಮಿ ದರ್ಶನದ ಜೊತೆಗೆ ಬೃಂದಾವನಕ್ಕೂ ಭೇಟಿ ನೀಡಿ, ಅಲ್ಲಿ ದೇವಸ್ಥಾನದ ಸಂಸ್ಥಾಪಕಿ ಕಮಲಮ್ಮ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಅನ್ನದಾಸೋಹವನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. ಬೆಂಗಳೂರು ಮತ್ತು ತುಮಕೂರಿನಿಂದ ಹೆಚ್ಚಿನ ಬಸ್ ಗಳನ್ನು ಸರ್ಕಾರ ವ್ಯವಸ್ಥೆ ಮಾಡಿತ್ತು. ಪಕ್ಕದಲ್ಲೇ ಇರುವ ತೀಥಾ ಜಲಾಶಯಕ್ಕೂ ಅನೇಕರು ಭೇಟಿ ಕೊಟ್ಟರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, August 25, 2007, 5:30 [IST]