ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಖ್ಯಮಂತ್ರಿಯನ್ನು ದರೋಡೆಕೋರ ಎಂದನೀಜನಾರ್ದನ !
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಹಿರಂಗ ಸಮರ ಸಾರಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಜಿ.ಜನಾರ್ದನ ರೆಡ್ಡಿ, ಈಗ ಇನ್ನಷ್ಟು ಸಿಡಿಮಿಡಿಗೊಂಡಿದ್ದಾರೆ.
ರೆಡ್ಡಿಗೆ ದುಡ್ಡಿನ ಮದಎನ್ನುವ ಮುಖ್ಯಮಂತ್ರಿಗಳ ಹೇಳಿಕೆ, ಜನಾರ್ದನ ರೆಡ್ಡಿಯನ್ನು ಕೆರಳಿಸಿದೆ.
ಸುದ್ದಿಗೋಷ್ಠಿಯಲ್ಲಿ ರೆಡ್ಡಿ ಹೇಳಿದ ಮಾತುಗಳು :
* ದರೋಡೆಕೋರ ಮುಖ್ಯಮಂತ್ರಿಗೆ ತಾಕತ್ತಿದ್ದರೆ ಬಳ್ಳಾರಿ ಅಥವಾ ಗದಗದಿಂದ ಸ್ಪರ್ಧಿಸಲಿ ನೋಡೋಣ. ಅವರ ಠೇವಣಿ ಕಳೆಯುತ್ತೇನೆ.
* ಕುಮಾರಸ್ವಾಮಿ ಮಾತ್ರವಲ್ಲ, ದೇವೇಗೌಡ ಸೇರಿದಂತೆ ಅವರ ಕುಟುಂಬವನ್ನೇ ಖರೀದಿಸುವ ತಾಕತ್ತು ನನಗಿದೆ.
* ದೇವೇಗೌಡ ಮತ್ತು ಅವರ ಮಕ್ಕಳ ಮುಖ ಕಂಡರೆ ರಾಜ್ಯದ ಜನರು ಅಸಹ್ಯ ಪಡಬೇಕು. ಆ ರೀತಿ ನಾನು ಮಾಡಿ ತೋರಿಸುತ್ತೇನೆ.
Story first published: Thursday, August 23, 2007, 5:30 [IST]