ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕದ ಹೊಸ ರಾಜ್ಯಪಾಲ ರಾಮೇಶ್ವರ ಠಾಕೂರ್ ಬಗ್ಗೆ
ಬೆಂಗಳೂರು, ಆಗಸ್ಟ್ 21 : ಕರ್ನಾಟಕದ 15ನೇ ರಾಜ್ಯಪಾಲರಾಗಿ ರಾಮೇಶ್ವರ ಠಾಕೂರ್ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್, ಪ್ರಮಾಣವಚನವನ್ನು ಬೋಧಿಸಿದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ವಿಧಾನ ಪರಿಷತ್ತಿನ ಸಭಾಧ್ಯಕ್ಷ ಕೃಷ್ಣ, ಪರಿಷತ್ತಿನ ಸಭಾಧ್ಯಕ್ಷ ಬಿ.ಕೆ.ಚಂದ್ರಶೇಖರ್, ಹೊಸ ರಾಜ್ಯಪಾಲರ ಪತ್ನಿ ನಿರ್ಮಲಾ ಠಾಕೂರ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಹೊಸ
ರಾಜ್ಯಪಾಲರ
ಬಗ್ಗೆ
ಕೆಲವು
ಸಂಗತಿಗಳು
:
- ಮೊನ್ನೆ ಜುಲೈ 28ಕ್ಕೆ ಠಾಕೂರ್ ಅವರಿಗೆ 80 ವರ್ಷ.
- ಶುದ್ಧ ಸಸ್ಯಹಾರಿ
- ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಜೈಲು ವಾಸ
- 1984ರಿಂದ 96ರ ವರೆಗೆ ರಾಜ್ಯಸಭಾ ಸದಸ್ಯ(ಎರಡು ಅವಧಿ)
- ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು(ಕಂದಾಯ) ಮತ್ತು ಗ್ರಾಮೀಣ ಅಭಿವೃದ್ಧಿ ಖಾತೆ ಸಚಿವರಾಗಿ ಸೇವೆ.
Comments
Story first published: Tuesday, August 21, 2007, 5:30 [IST]