ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆ : ಆಕರ್ಷಕ ಬಹುಮಾನ
ನವದೆಹಲಿ, ಆಗಸ್ಟ್ 21 : ಶ್ರೀ ರಾಘವೇಂದ್ರ ಸ್ವಾಮೀಜಿ ಅವರ 336ನೇ ಆರಾಧನೆ ಅಂಗವಾಗಿ, ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ದೇಶದ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಹುದು.
ಚಿತ್ರ ರಚನಾ ವಿಷಯ :
"ಶ್ರೀ ವಿಷ್ಣುವಿನ ನರಸಿಂಹ ಅವತಾರ ಹಾಗೂ ಭಕ್ತ ಪ್ರಹ್ಲಾದನ ರಕ್ಷಣೆ"( ಈ ಕಥೆಯ ಯಾವುದೇ ಭಾಗವನ್ನು ರಚನೆಗೆ ಆಯ್ದುಕೊಳ್ಳಬಹುದು)
ಮೊದಲ ಬಹುಮಾನ : ರೂ.10, 000 ನಗದು , ಪ್ರಮಾಣ ಪತ್ರ ಹಾಗೂ ಸ್ಮರಣ ಫಲಕ
ಎರಡನೇ ಬಹುಮಾನ : ರೂ.5,000 ನಗದು , ಪ್ರಮಾಣ ಪತ್ರ ಹಾಗೂ ಸ್ಮರಣ ಫಲಕ
ನಿಬಂಧನೆಗಳು
:
- ಪ್ರಥಮ ಹಾಗೂ ದ್ವಿತೀಯ ಪಿಯೂಸಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
- ಚಿತ್ರವನ್ನು ಮನೆಯಲ್ಲಿ ಅಥವಾ ಕಾಲೇಜಿನಲ್ಲಿ ರಚಿಸಿ ನಮ್ಮ ವಿಳಾಸಕ್ಕೆ ಕಳಿಸಬಹುದು.
- ಜಲವರ್ಣ ಚಿತ್ರ(water painting) ಮತ್ತು ತೈಲ ವರ್ಣ(oil painting)ಚಿತ್ರ ರಚನೆಗೆ ಅವಕಾಶವಿದೆ. ಆದರೆ ಇವುಗಳಿಗೆ ಪ್ರತ್ಯೇಕ ಸ್ಪರ್ಧೆಯಿಲ್ಲ.
- ಚಿತ್ರ ರಚನಾ ವಿಸ್ತೀರ್ಣ(canvas size) 500 X 353 ಮಿ.ಮಿ ಮಿತಿ ದಾಟಬಾರದು.
- ಒಬ್ಬ ಸ್ಪರ್ಧಿ ಒಂದು ಚಿತ್ರವನ್ನು ರಚಿಸಿ ಕಳಿಸಲು ಮಾತ್ರ ಅವಕಾಶವಿರುತ್ತದೆ.
- ಸ್ವ ರಚಿತ ಕಲಾಕೃತಿಗೆ ಮಾತ್ರ ಅವಕಾಶವಿರುತ್ತದೆ.ವೆಬ್ ಸೈಟ್, ವಾರಪತ್ರಿಕೆ ಅಥವಾ ಇತರೆ ಮೂಲಗಳಿಂದ ಕದ್ದ ಚಿತ್ರಗಳನ್ನು ಸ್ವೀಕರಿಸುವುದಿಲ್ಲ.
- ಚಿತ್ರಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕು ಶ್ರೀ ಮಠ ಹೊಂದಿರುತ್ತದೆ.
- ಇತ್ತೀಚಿನ ಭಾವಚಿತ್ರ ಹಾಗೂ ಸ್ವ ವಿವರ, ಕಾಲೇಜಿನ ಪ್ರಮಾಣ ಪತ್ರದೊಂದಿಗೆ ದಿನಾಂಕ 25/08/2007ರೊಳಗೆ ಕಳಿಸಬೇಕು.
ಚಿತ್ರಗಳನ್ನು ಕಳಿಸಬೇಕಾದ ವಿಳಾಸ :
Raghunandana
Sharma,
Contest
Organiser,
Mantralayam
Sri
Raghavendra
Swamy
Mutt,
Rao
Tularam
Marg,
Sector
12,
RK
Puram,
New
Delhi
22
ಹೆಚ್ಚಿನ ವಿವರಗಳಿಗಾಗಿ ಗಮನಿಸಿ :
Website
:
http://www.srsmutt.org/
Email
:
[email protected]
Phone
:
011-26172892,
09968346979
(ಏಜನ್ಸೀಸ್)
Comments
Story first published: Tuesday, August 21, 2007, 5:30 [IST]