ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆ : ಆಕರ್ಷಕ ಬಹುಮಾನ

By Staff
|
Google Oneindia Kannada News

Sri Sushameendra teertha swamiji and Suyateendra swamiji, Mantralaya mathನವದೆಹಲಿ, ಆಗಸ್ಟ್ 21 : ಶ್ರೀ ರಾಘವೇಂದ್ರ ಸ್ವಾಮೀಜಿ ಅವರ 336ನೇ ಆರಾಧನೆ ಅಂಗವಾಗಿ, ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದೇಶದ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಹುದು.

ಚಿತ್ರ ರಚನಾ ವಿಷಯ :

"ಶ್ರೀ ವಿಷ್ಣುವಿನ ನರಸಿಂಹ ಅವತಾರ ಹಾಗೂ ಭಕ್ತ ಪ್ರಹ್ಲಾದನ ರಕ್ಷಣೆ"( ಈ ಕಥೆಯ ಯಾವುದೇ ಭಾಗವನ್ನು ರಚನೆಗೆ ಆಯ್ದುಕೊಳ್ಳಬಹುದು)

ಮೊದಲ ಬಹುಮಾನ : ರೂ.10, 000 ನಗದು , ಪ್ರಮಾಣ ಪತ್ರ ಹಾಗೂ ಸ್ಮರಣ ಫಲಕ

ಎರಡನೇ ಬಹುಮಾನ : ರೂ.5,000 ನಗದು , ಪ್ರಮಾಣ ಪತ್ರ ಹಾಗೂ ಸ್ಮರಣ ಫಲಕ

ನಿಬಂಧನೆಗಳು :

  • ಪ್ರಥಮ ಹಾಗೂ ದ್ವಿತೀಯ ಪಿಯೂಸಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
  • ಚಿತ್ರವನ್ನು ಮನೆಯಲ್ಲಿ ಅಥವಾ ಕಾಲೇಜಿನಲ್ಲಿ ರಚಿಸಿ ನಮ್ಮ ವಿಳಾಸಕ್ಕೆ ಕಳಿಸಬಹುದು.
  • ಜಲವರ್ಣ ಚಿತ್ರ(water painting) ಮತ್ತು ತೈಲ ವರ್ಣ(oil painting)ಚಿತ್ರ ರಚನೆಗೆ ಅವಕಾಶವಿದೆ. ಆದರೆ ಇವುಗಳಿಗೆ ಪ್ರತ್ಯೇಕ ಸ್ಪರ್ಧೆಯಿಲ್ಲ.
  • ಚಿತ್ರ ರಚನಾ ವಿಸ್ತೀರ್ಣ(canvas size) 500 X 353 ಮಿ.ಮಿ ಮಿತಿ ದಾಟಬಾರದು.
  • ಒಬ್ಬ ಸ್ಪರ್ಧಿ ಒಂದು ಚಿತ್ರವನ್ನು ರಚಿಸಿ ಕಳಿಸಲು ಮಾತ್ರ ಅವಕಾಶವಿರುತ್ತದೆ.
  • ಸ್ವ ರಚಿತ ಕಲಾಕೃತಿಗೆ ಮಾತ್ರ ಅವಕಾಶವಿರುತ್ತದೆ.ವೆಬ್ ಸೈಟ್, ವಾರಪತ್ರಿಕೆ ಅಥವಾ ಇತರೆ ಮೂಲಗಳಿಂದ ಕದ್ದ ಚಿತ್ರಗಳನ್ನು ಸ್ವೀಕರಿಸುವುದಿಲ್ಲ.
  • ಚಿತ್ರಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕು ಶ್ರೀ ಮಠ ಹೊಂದಿರುತ್ತದೆ.
  • ಇತ್ತೀಚಿನ ಭಾವಚಿತ್ರ ಹಾಗೂ ಸ್ವ ವಿವರ, ಕಾಲೇಜಿನ ಪ್ರಮಾಣ ಪತ್ರದೊಂದಿಗೆ ದಿನಾಂಕ 25/08/2007ರೊಳಗೆ ಕಳಿಸಬೇಕು.
ವಿಜೇತರನ್ನು ಆಗಸ್ಟ್ 31ರಂದು ಘೋಷಿಸಲಾಗುವುದು.

ಚಿತ್ರಗಳನ್ನು ಕಳಿಸಬೇಕಾದ ವಿಳಾಸ :

Raghunandana Sharma,
Contest Organiser,
Mantralayam Sri Raghavendra Swamy Mutt,
Rao Tularam Marg, Sector 12,
RK Puram, New Delhi 22

ಹೆಚ್ಚಿನ ವಿವರಗಳಿಗಾಗಿ ಗಮನಿಸಿ :

Website : http://www.srsmutt.org/
Email : [email protected]
Phone : 011-26172892, 09968346979

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X