ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಅಸ್ಗರ್!
ಬೆಂಗಳೂರು, ಆಗಸ್ಟ್ 18 : ರಾಜಧಾನಿ ನಗರಕ್ಕೆ ಭಯ ತಪ್ಪುತ್ತಿಲ್ಲ. ನಗರದ ವಿವಿಧೆಡೆ ಸರಣಿ ಬಾಂಬ್ ಸ್ಫೋಟಿಸುವ ಹುನ್ನಾರ ನಡೆಸಿದ್ದ ಗುಂಪೊಂದನ್ನು ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿ 3ನೇ ಹಂತದಲ್ಲಿ ಕಾರಿನಲ್ಲಿ ಕೂತು, ದುಷ್ಕೃತ್ಯವೊಂದಕ್ಕೆ ಹುನ್ನಾರ ನಡೆಸಿದ್ದ ರೌಡಿ ಅಸ್ಗರ್ ಪಾಷಾ ಮತ್ತು ಅವನ 3ಮಂದಿ ಸಹಚರರನ್ನು ಬಂಧಿಸಿರುವ ಬೆಂಗಳೂರು ಪೊಲೀಸರು, ಕೆಲವು ಮಹತ್ವದ ಸಂಗತಿಗಳನ್ನು ಬಾಯಿಬಿಡಿಸಿದ್ದಾರೆ.
ನಕ್ಸಲರ ಜೊತೆ ಸಹಾ ನಂಟು ಹೊಂದಿದ್ದಾನೆ ಎನ್ನಲಾಗಿರುವ ಅಸ್ಗರ್ ನನ್ನು ಪೊಲೀಸರು ಬಂಧಿಸದಿದ್ದರೇ, ಮುಂದಿನ ದಿನಗಳಲ್ಲಿ ಉದ್ಯಾನ ನಗರಿಯಲ್ಲಿ ರಕ್ತದ ಪ್ರವಾಹ ಹರಿಯುತ್ತಿತ್ತು ಎನ್ನುತ್ತಾರೆ ಪೊಲೀಸರು.
ಬೆಂಗಳೂರಿನ ಮಂಗಮ್ಮನ ಪಾಳ್ಯದ ನಿವಾಸಿಯಾಗಿರುವ ಅಸ್ಗರ್ ವಿರುದ್ಧ ಕೊಲೆ, ದೊಂಬಿ, ಜೀವ ಬೆದರಿಕೆ, ಅಪಹರಣದ ಪ್ರಕರಣಗಳು ಈ ಹಿಂದೆ ದಾಖಲಾಗಿದ್ದವು.
(ದಟ್ಸ್ ಕನ್ನಡ ವಾರ್ತೆ)
Story first published: Saturday, August 18, 2007, 5:30 [IST]