ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನನ್ನ ಸಾವಿಗೆ ಬಿಜೆಪಿ ಪಿತೂರಿ : ಮನಮೋಹನ್ ಸಿಂಗ್
ಬೆಂಗಳೂರು, ಆಗಸ್ಟ್ 18 : ನನ್ನ ಸಾವಿಗೆ ಪ್ರತಿ ಪಕ್ಷವಾದ ಬಿಜೆಪಿ ಪಿತೂರಿ ನಡೆಸಿತ್ತು ಎಂದು ಪ್ರಧಾನಿ ಮನಮೋಹನ್ ಸಿಂಗ್ ಆರೋಪಿಸಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರಾಜಕೀಯ ಭವಿಷ್ಯ ಮುಗಿಸುವ ಪ್ರಯತ್ನಗಳು, ಈ ರಂಗದಲ್ಲಿ ಸಹಜ. ಆದರೆ ನನ್ನ ಸಾವಿಗಾಗಿ ಪ್ರತಿಪಕ್ಷಗಳು ಹೋಮ ಹವನ ನಡೆಸಿವೆ. ಭಗವಂತನ ದಯೆಯಿಂದ ನಾನಿನ್ನೂ ಬದುಕಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಧಾನಿ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಇದು ಅವರ ಘನತೆಗೆ ಶೋಭೆ ತರುವುದಿಲ್ಲ. ರಾಷ್ಟ್ರೀಯ ಪಕ್ಷವೊಂದರ ಪ್ರಮುಖರಾಗಿ, ದೇಶದ ಪ್ರಧಾನಿಯಾಗಿ ಅವರು ಈ ಮಟ್ಟಕ್ಕೆ ಇಳಿಯಬಾರದು. ಇಂತಹ ಟೀಕೆಗಳನ್ನು ಮಾಡಬಾರದು. ಪ್ರಧಾನಿ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ.
(ಏಜನ್ಸೀಸ್)
Comments
Story first published: Saturday, August 18, 2007, 5:30 [IST]