ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡ ಕಟ್ಟಾಳು ವಾಟಾಳ್ ರ ಕಾಣಲು ನಾಗರಾಜ ಬಂದಿದ್ದ!
ಶುಕ್ರವಾರ, ಕೆಲವೆಡೆ ಶನಿವಾರ ನಾಗರಪಂಚಮಿ ಹಬ್ಬ. ಈ ಮಧ್ಯೆ ನಮ್ಮ ಸ್ವಘೋಷಿತ ಕನ್ನಡ ಹೀರೋ ವಾಟಾಳ್ ಅವರನ್ನು ನೋಡಲು ನಾಗರಾಜ(ಹಾವು), ನಾಗಲೋಕದಿಂದ ನೇರವಾಗಿ ಆಗಮಿಸಿದ್ದ!
ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶಾಸಕ ವಾಟಾಳ್ ನಾಗರಾಜ್ ಅವರ ಮನೆ ಪ್ರವೇಶಿಸಿದ ಸರ್ಪರಾಜನನ್ನು ಕಂಡು, ಮನೆಯವರು ಕಸಿವಿಸಿಕೊಂಡರು. ಭಯದಿಂದ ತತ್ತರಿಸಿದರು. ಈ ಸಂದರ್ಭದಲ್ಲಿ ವಾಟಾಳ್ ಮನೆಯಲ್ಲಿರಲಿಲ್ಲ. ಇದ್ದಿದ್ದರೆ, ಕಪ್ಪು ಬಾವುಟ ತೋರಿಸುತ್ತಿದ್ದಾರೇನೋ?
ಕೊನೆಗೆ ಹಾವು ಹಿಡಿಯುವವರು ಬಂದರು. ಹಾವನ್ನು ಚೀಲದಲ್ಲಿ ಹಾಕಿಕೊಂಡು, ಆತಂಕ ನಿವಾರಿಸಿದರು.
Comments
Story first published: Friday, August 17, 2007, 5:30 [IST]