ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಲಾ ಸೌಧ : ಕಾರ್ಕಳ ತಾಲೂಕಿನಲ್ಲಿ ಕಲ್ಲು ಅರಳಲಿದೆ!
ಮಂಗಳೂರು, ಆಗಸ್ಟ್ 17 : ಕೆನರಾ ಬ್ಯಾಂಕ್ ಸುಮಾರು 1.25 ಕೋಟಿ ವೆಚ್ಚದಲ್ಲಿ ಕಲಾ ಸೌಧವನ್ನು ಕಾರ್ಕಳ ತಾಲೂಕಿನ ಮಿಯಾರಿನಲ್ಲಿ ನಿರ್ಮಾಣ ಮಾಡಿದ್ದು, ಶನಿವಾರ ಉದ್ಘಾಟನೆ ನೆರವೇರಲಿದೆ.
ಈ ಬಗ್ಗೆ ಸುದ್ಧಿಗಾರರ ಜೊತೆ ಮಾತನಾಡಿದ ಕೆನರಾ ಬ್ಯಾಂಕ್ ಮಂಗಳೂರು ವೃತ್ತದ ಡಿಜಿಎಂ ಎಂ.ಎಂ.ಕುಡ್ವಾ, ಶಿಲ್ಪಾ ಕಲೆಯನ್ನು ಯುವಕರಿಗೆ ಇಲ್ಲಿ ಕಲಿಸಲಾಗುತ್ತದೆ. ಅಗತ್ಯ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತದೆ ಎಂದರು.
ಸುಮಾರು 18ರಿಂದ 25ವರ್ಷ ವಯಸ್ಸಿನ ಎಸ್ಎಸ್ಎಲ್ ಸಿ ಪಾಸು ಅಥವಾ ನಪಾಸಾದ ಅಭ್ಯರ್ಥಿಗಳು ಇಲ್ಲಿ ತರಬೇತಿ ಪಡೆಯಬಹುದು. ಹದಿನೆಂಟು ತಿಂಗಳ ಕಾಲ ಇಲ್ಲಿ ತರಬೇತಿ ನೀಡಲಾಗುತ್ತದೆ. ಕಲಾಸೌಧವನ್ನು ಕೆನರಾ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ಎನ್.ರಾವ್ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.
(ಯುಎನ್ಐ)
Comments
Story first published: Friday, August 17, 2007, 5:30 [IST]