ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಘುನಾಥರ ಒಳಗೂ ಮಳೆ ಹೊರಗೂ ಮಳೆಗೆ ಪ್ರಶಸ್ತಿ
ಬೆಂಗಳೂರು, ಆಗಸ್ಟ್ 16 : ಪತ್ರಕರ್ತ ಮತ್ತು ಕಥೆಗಾರ ರಘುನಾಥ ಚ.ಹ. ಅವರ ಒಳಗೂ ಮಳೆ, ಹೊರಗೂ ಮಳೆ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಸಂದಿದೆ.
ಶುಕ್ರವಾರ ಬೆಳಗ್ಗೆ 11ಕ್ಕೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸುವರು. ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಇತ್ತೀಚೆಗಷ್ಟೇ ರಘುನಾಥ ಅವರ ಇದೇ ಸಂಕಲನಕ್ಕೆ, ತುಮಕೂರಿನ ಕೆ.ಸಾಂಬಶಿವಪ್ಪ ಪ್ರತಿಷ್ಠಾನದ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಸಂದಿತ್ತು.
(ದಟ್ಸ್ ಕನ್ನಡ ವಾರ್ತೆ)
Story first published: Thursday, August 16, 2007, 5:30 [IST]